Select Your Language

Notifications

webdunia
webdunia
webdunia
webdunia

ಅತೃಪ್ತ ಶಾಸಕರೊಂದಿಗೆ ಸಿಎಂ ಚರ್ಚೆಗೆ ಮುಹೂರ್ತ ಫಿಕ್ಸ್: ಖಡಕ್ ಮಾತು ಹೇಳಿದ ಶಾಸಕ

ಅತೃಪ್ತ ಶಾಸಕರೊಂದಿಗೆ ಸಿಎಂ ಚರ್ಚೆಗೆ ಮುಹೂರ್ತ ಫಿಕ್ಸ್: ಖಡಕ್ ಮಾತು ಹೇಳಿದ ಶಾಸಕ
ಬೆಂಗಳೂರು , ಗುರುವಾರ, 4 ಜುಲೈ 2019 (15:57 IST)
ಮೈತ್ರಿ ಸರಕಾರದ ಅತೃಪ್ತ ಶಾಸಕರೊಂದಿಗೆ ಸಿಎಂ ಸಮಯ ನಿಗದಿಗೊಳಿಸಿದ್ದಾರೆ. ಇದರ ಬೆನ್ನಲ್ಲೇ ತಮ್ಮ ಬೇಡಿಕೆಗಳನ್ನು ಇನ್ನಷ್ಟು ಬಿಗಿಗೊಳಿಸಿದ್ದಾರೆ ಬಂಡಾಯ ಶಾಸಕರು.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಜತೆಗೆ ನಾನು ಮಾತುಕತೆಗೆ ಸಿದ್ಧನಿದ್ದೇನೆ.

ಆದರೆ ಅವರು ನನ್ನ ಬೇಡಿಕೆಗೆ ಸ್ಪಂದನೆ ನೀಡಿದರೆ ಮಾತ್ರ ಮಾತನಾಡುವೆ. ಹೀಗಂತ ಕೈ ಪಡೆಯ ಶಾಸಕ ಆನಂದ ಸಿಂಗ್ ಹೇಳಿದ್ದಾರೆ.

ಬೇಡಿಕೆಗಳು ಏನೇನೂ ಅನ್ನೋದನ್ನು ಪಕ್ಷದ ನಾಯಕರಿಗೆ ತಿಳಿಸಿದ್ದೇನೆ. ಅವರು ಸಿಎಂಗೆ ವಿಷಯ ತಿಳಿಸಲಿದ್ದಾರೆ ಎಂದರು.

ಬೇಡಿಕೆಗಳನ್ನು ಈಡೇರಿಸುವುದಾದರೆ ಮಾತ್ರ ಸಿಎಂ ಜೊತೆಗೆ ಚರ್ಚೆ ಮಾಡುವೆ. ಕೋರ್ಟ್ ನಲ್ಲಿ ಹಾಜರಾಗಬೇಕಾದ ಕಾರಣ ಬೆಂಗಳೂರಿಗೆ ಬಂದಿದ್ದೆ. ಈಗ ಹೊಸಪೇಟೆಗೆ ಹೊರಡುತ್ತಿರುವೆ ಎಂದು ಹೇಳಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಹಕ್ಕು ಪತ್ರ ವಿತರಣೆಗೆ 15 ದಿನ ಡೆಡ್ ಲೈನ್ ನೀಡಿದ ಸಚಿವ