Publish Date: Sun, 25 Nov 2018 (19:34 IST)
Updated Date: Sun, 25 Nov 2018 (19:36 IST)
ನಟ ಅಂಬರೀಶ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಆತ್ಮೀ ಸ್ನೇಹಿತ ನನ್ನು ಕಳೆದುಕೊಂಡಿದ್ದೇನೆ ಎಂದು ಕಂಬನಿ ಮಿಡಿದಿದ್ದಾರೆ.
ಮಂಗಳೂರಿನಲ್ಲಿ ಕಂದಾಯ ಸಚಿವ ದೇಶಪಾಂಡೆ ಹೇಳಿಕೆ ನೀಡಿದ್ದು, ಕರ್ನಾಟಕ ಮಾತ್ರವಲ್ಲ, ದೇಶದ ಚಿತ್ರರಂಗದಲ್ಲಿ ಖ್ಯಾತಿಯಾಗಿದ್ದರು. ರಾಜ್ ಕುಮಾರ್ ನಂತರ ಚಲನಚಿತ್ರ ರಂಗಕ್ಕೆ ಆಧಾರ ಸ್ತಂಭವಾಗಿದ್ದವರು ಅಂಬರೀಶ್. ಅವರ ನಿಧನ ಚಿತ್ರರಂಗಕ್ಕೆ ದೊಡ್ಡ ನಷ್ಟ ತಂದಿದೆ. ವಸತಿ ಸಚಿವರಾಗಿ ಹೆಮ್ಮೆ ಪಡುವ ಕೆಲಸ ಮಾಡಿದ್ದರು. ಬಡವರು, ಜನರ ಬಗ್ಗೆ ಅಪಾರ ಕಾಳಜಿ ಹೊಂದಿದ ಸ್ನೇಹಜೀವಿಯಾಗಿದ್ದರು.
ಅಂಬರೀಶ್ ಅಗಲಿಕೆಯಿಂದ ನಾಡಿನ ಶ್ರೇಷ್ಠ ನಾಯಕನನ್ನು ಕಳೆದುಕೊಂಡಿದ್ದೇವೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ.