Select Your Language

Notifications

webdunia
webdunia
webdunia
webdunia

ರೆಬಲ್ ಸ್ಟಾರ್ ನಿಧನಕ್ಕೆ ಶಾಸಕ ಅಜಯಸಿಂಗ್ ಸಂತಾಪ

ರೆಬಲ್ ಸ್ಟಾರ್ ನಿಧನಕ್ಕೆ ಶಾಸಕ ಅಜಯಸಿಂಗ್ ಸಂತಾಪ
ಬೆಂಗಳೂರು , ಭಾನುವಾರ, 25 ನವೆಂಬರ್ 2018 (18:39 IST)
ಮಾಜಿ ಸಚಿವ, ಹಿರಿಯ ನಟ, ರೆಬಲ್ ಸ್ಟಾರ್ ಅಂಬರೀಶ್ ನಿಧನಕ್ಕೆ ಶಾಸಕ ಅಜಯಸಿಂಗ್ ಸಂತಾಪ ಸೂಚಿಸಿದ್ದಾರೆ.

ಅಂಬರೀಶ್ ರ ಅಗಲಿಕೆ ಬಹಳ ದುಃಖದ ಸಂಗತಿಯಾಗಿದೆ. ಡಾ.ರಾಜಕುಮಾರ, ವಿಷ್ಣುವರ್ಧನ ನಂತರ ಅಂಬರೀಶ್  ಅವರೆ ಹಿರಿಯ ನಟರಾಗಿದ್ದರು. ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಶಾಸಕರಾಗಿ, ಸಚಿವರು ಕೂಡ ಆಗಿದ್ದರು.

ಕೇಂದ್ರ ಸಚಿವರಾಗಿದ್ದಾಗ ಕಾವೇರಿ ಸಮಸ್ಯೆ ಬಂದಾಗ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ನಮ್ಮ ತಂದೆ ದಿ.ದರ್ಮಸಿಂಗ್ ಅವರ ಜೊತೆ ಉತ್ತಮ ಸಂಬಂಧ ಹೊಂದಿದ್ದರು.

ನಮ್ಮ ಮನೆಗೆ ಬಂದಾಗ ಅಜಯ ಚೆನ್ನಾಗಿ ಇದ್ದೀಯಾ ಅಂತ ಮಾತನಾಡಿಸುತ್ತಿದ್ದರು ಎಂದು ಭಾವುಕರಾಗಿಯೇ ಸಂತಾಪ ವ್ಯಕ್ತಪಡಿಸಿದ ಶಾಸಕ ಡಾ.ಅಜಯಸಿಂಗ್.

 

Share this Story:

Follow Webdunia kannada

ಮುಂದಿನ ಸುದ್ದಿ

ಬಿಸಿಲೂರಿಗೆ ಅಂಬಿ ನಂಟು: ಅಕ್ಷರ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಕಣ್ವರಲಾಲ್