Select Your Language

Notifications

webdunia
webdunia
webdunia
webdunia

ಬಳ್ಳಾರಿಗೆ ಎಂಟ್ರಿಕೊಟ್ಟ ಗಣಿಧಣಿ ರೆಡ್ಡಿ

ಬಳ್ಳಾರಿಗೆ ಎಂಟ್ರಿಕೊಟ್ಟ ಗಣಿಧಣಿ ರೆಡ್ಡಿ
ಬಳ್ಳಾರಿ , ಶನಿವಾರ, 8 ಜೂನ್ 2019 (17:26 IST)
ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಬಳ್ಳಾರಿ ನಗರಕ್ಕೆ ಎಂಟ್ರಿ ಕೊಡುತ್ತಿರುವುದು ಚರ್ಚೆಯಾಗುತ್ತಿದೆ.

ಎರಡು ವಾರಗಳ ಕಾಲ ಬಳ್ಳಾರಿಯಲ್ಲಿ ಇರಲು ಸುಪ್ರೀಂ ಕೋರ್ಟ್ ಅನುಮತಿ ‌ನೀಡಿರುವ ಹಿನ್ನೆಲೆಯಲ್ಲಿ ಜನಾರ್ಧನ ರೆಡ್ಡಿ ಬಳ್ಳಾರಿಗೆ ಆಗಮಿಸುತ್ತಿದ್ದಾರೆ.

ರೆಡ್ಡಿ ಅವರ ಮಾವನವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ದಾಖಲಾಗಿರುವುದರಿಂದ ಅವರನ್ನು ನೋಡಲೆಂದು ಸುಪ್ರೀಂನಿಂದ ಅನುಮತಿ ಪಡೆದಿದ್ದಾರೆ.

ಅಕ್ರಮ ಗಣಿಗಾರಿಕೆ ಆರೋಪದಡಿ ಸಿಬಿಐನಿಂದ ಬಂಧಿತರಾದ ಅವರಿಗೆ 2015 ರಲ್ಲಿ ಜಾಮೀನು‌ ನೀಡಿದ್ದರೂ ಬಳ್ಳಾರಿ ಪ್ರವೇಶಕ್ಕೆ ಅನುಮತಿ‌ ನೀಡರಲಿಲ್ಲ. ಆದ್ದರಿಂದ ಸುಪ್ರೀಂ ಅನುಮತಿ ಪಡೆದು ಬಳ್ಳಾರಿಗೆ ಆಗಮಿಸುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮುಂಗಾರು ಮಳೆ ಪ್ರವೇಶಕ್ಕೆ ಕ್ಷಣಗಣನೆ