Select Your Language

Notifications

webdunia
webdunia
webdunia
webdunia

ಕಚೇರಿಯ ಮುಖ್ಯದ್ವಾರಕ್ಕೆ ಇದನ್ನು ಕಟ್ಟಿದರೆ ಲಕ್ಷ್ಮೀ ದೇವಿ ಒಳಗೆ ಪ್ರವೇಶಿಸುತ್ತಾಳಂತೆ

ಕಚೇರಿಯ ಮುಖ್ಯದ್ವಾರಕ್ಕೆ ಇದನ್ನು ಕಟ್ಟಿದರೆ ಲಕ್ಷ್ಮೀ ದೇವಿ ಒಳಗೆ ಪ್ರವೇಶಿಸುತ್ತಾಳಂತೆ
ಬೆಂಗಳೂರು , ಬುಧವಾರ, 5 ಜೂನ್ 2019 (07:25 IST)
ಬೆಂಗಳೂರು : ಮನುಷ್ಯನಾದ ಮೇಲೆ ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿರುತ್ತಾರೆ. ಅದರಲ್ಲೂ ಹೆಚ್ಚಿನವರು ಅನುಭವಿಸುವ ಸಮಸ್ಯೆ ಎಂದರೆ ಹಣದ ಸಮಸ್ಯೆ. ಈ ಸಮಸ್ಯೆ ದೂರವಾಗಬೇಕೆಂದರೆ ಅದಕ್ಕೆ ಲಕ್ಷ್ಮೀ ದೇವಿಯ ಅನುಗ್ರಹ ದೊರಕಬೇಕು. ಅದಕ್ಕಾಗಿ ಹೀಗೆ ಮಾಡಿ.




ಶುಕ್ರವಾರ ಹಾಗೂ ಸಪ್ತಮಿ ತಿಥಿಯಲ್ಲಿ ಸೂರ್ಯೋದಯಕ್ಕೂ ಮೊದಲು ಎದ್ದು ನೀರಿಗೆ ಅರಿಶಿನ ಹಾಕಿ ತಲೆಸ್ನಾನ ಮಾಡಿ, ನಂತರ ದೇವರ ಕೋಣೆಯನ್ನು ಸ್ವಚ್ಚ ಮಾಡಿ ದೇವರಿಗೆ ಪೂಜೆ ಮಾಡಬೇಕು. 3 ಅರಶಿನ ಕೊಂಬನ್ನು ತೆಗೆದುಕೊಂಡು ಅದಕ್ಕೆ ಶ್ರೀಗಂಧ, ಅರಶಿನ, ಕುಂಕುಮ, ಪುಷ್ಪವನ್ನು ಸಮರ್ಪಿಸಿ. ನಂತರ ಅದನ್ನು ದೇವರ ಪೀಠದ ಮೇಲಿಟ್ಟು ‘ಓಂ ಬ್ರಹಸ್ಪತಯೇ ನಮಃ’ ಎಂದು ಪ್ರಾರ್ಥಿಸಿ ಬಾಳೆಹಣ್ಣನ್ನು ನೈವೇದ್ಯವಾಗಿ ಸಮರ್ಪಿಸಬೇಕು.


ನಂತರ ಈ 3 ಅರಶಿನ ಕೊಂಬಿಗೆ ದಾರವನ್ನು ಕಟ್ಟಿ ಸಂಜೆ 6-6.30ರೊಳಗೆ ನೀವು ವ್ಯಾಪಾರ ಮಾಡುವ ಅಥವಾ ನೀವು ಸಂಪಾದನೆ ಮಾಡುವ ಸ್ಥಳದ ಮುಖ್ಯದ್ವಾರಕ್ಕೆ ಮೇಲ್ಭಾಗಕ್ಕೆ ಈ 3 ಅರಶಿನ ಕೊಂಬನ್ನು ಕಟ್ಟಿ ಧೂಪದ ಹೊಗೆ ಹಿಡಿಯಬೇಕು. ಇದರಿಂದ ಲಕ್ಷ್ಮೀದೇವಿಯು ನಿಮ್ಮ ಮನೆ ಪ್ರವೇಶಿಸಿ ಆರ್ಥಿಕ ಸಮಸ್ಯೆ ದೂರಮಾಡುತ್ತಾಳೆ.


 

Share this Story:

Follow Webdunia kannada

ಮುಂದಿನ ಸುದ್ದಿ

ನಕ್ಷತ್ರಗಳಿಗನುಗುಣವಾಗಿ ಯಾವ ಗಾಯತ್ರಿ ಮಂತ್ರ ಜಪಿಸಬೇಕು?