Select Your Language

Notifications

webdunia
webdunia
webdunia
webdunia

ಪ್ರೀತಿಸಿದವರನ್ನು ಒಂದು ಮಾಡಿದ್ದಕ್ಕೆ ಸ್ನೇಹಿತನನ್ನೇ ಕೊಂದ್ರು!

ಪ್ರೀತಿಸಿದವರನ್ನು ಒಂದು ಮಾಡಿದ್ದಕ್ಕೆ ಸ್ನೇಹಿತನನ್ನೇ ಕೊಂದ್ರು!
ಮಂಡ್ಯ , ಭಾನುವಾರ, 19 ಡಿಸೆಂಬರ್ 2021 (16:55 IST)
ಮಂಡ್ಯ : ಪ್ರೀತಿ ಮಾಡುತ್ತಿದ್ದ ಜೋಡಿಗೆ ಮದುವೆ ಮಾಡಿಸಿದ್ದ ಯುವಕನ್ನನ್ನು ಆತನ ಸ್ನೇಹಿತರೇ ಮಾರಕಾಸ್ತ್ರಗಳಿಂದ ಕೊಲೆ ಮಾಡಿರುವ ಘಟನೆ ಮಂಡ್ಯದ ಕಲ್ಲಹಳ್ಳಿ ಬಡಾವಣೆಯಲ್ಲಿ ಬೆಳಕಿಗೆ ಬಂದಿದೆ.
 
ಮಂಡ್ಯ ತಾಲೂಕಿನ ಯಲಿಯೂರು ಗ್ರಾಮದ ರಕ್ಷಿತ್ (21) ಕೊಲೆಯಾದ ಯುವಕನಾಗಿದ್ದಾನೆ. ರಕ್ಷಿತ್ ಕಳೆದ ಒಂದು ತಿಂಗಳ ಹಿಂದೆ ಪ್ರೀತಿ ಮಾಡುತ್ತಿದ್ದ ತನ್ನ ಸ್ನೇಹಿತನಿಗೆ ಮದುವೆ ಮಾಡಿಸಿರುತ್ತಾನೆ. ಇದೇ ವಿಚಾರಕ್ಕೆ ತನ್ನ ಸ್ನೇಹಿತರ ಗ್ಯಾಂಗ್ನಲ್ಲಿ ಸಣ್ಣ-ಪುಟ್ಟ ಗಲಾಟೆಯಾಗಿರುತ್ತದೆ.

ಶನಿವಾರ ರಕ್ಷಿತ್ ಹಾಗೂ ಸ್ನೇಹಿತರು ಕಲ್ಲಹಳ್ಳಿ ಬಡಾವಣೆಯ ರೈಲ್ವೆ ಟ್ರಾಕ್ ಬಳಿ ಪಾರ್ಟಿ ಮಾಡುತ್ತಿರುತ್ತಾರೆ. ಈ ವೇಳೆ ಈ ಹಿಂದೆ ರಕ್ಷಿತ್ ಮದುವೆ ಮಾಡಿಸಿದ ವಿಚಾರ ಪ್ರಸ್ತಾಪವಾಗುತ್ತದೆ. ಬಳಿಕ ಪರಸ್ಪರ ಮಾತಿಗೆ ಮಾತು ಬೆಳೆದಿದ್ದು, ರಕ್ಷಿತ್ ಸುತ್ತ ಇದ್ದ ಸ್ನೇಹಿತರು ಮಾರಕಾಸ್ತ್ರದಿಂದ ರಕ್ಷಿತ್ ಮೇಲೆ ಹಲ್ಲೆ ನಡೆಸಿದ್ದಾರೆ. 

ಅಲ್ಲಿಂದ ತಪ್ಪಿಸಿಕೊಂಡು ರಕ್ಷಿತ್ ಕಲ್ಲಹಳ್ಳಿ ಬಡಾವಣೆಯ ಮನೆಯೊಂದರ ಕಾಂಪೌಂಡ್ ಬಳಿ ಅವಿತುಕೊಳ್ಳುತ್ತಾನೆ. ಬಳಿಕ ರಕ್ತದ ಮಡುವಿನಲ್ಲಿ ಬಿದಿದ್ದ ರಕ್ಷಿತ್ನನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದಲ್ಲಿ ಕೊರೊನಾ ಸ್ಪೋಟ