Webdunia - Bharat's app for daily news and videos

Install App

ಮದ್ಯ ಪಾರ್ಸಲ್ ನಿಂದ ಕಂಗಾಲಾದ ರೆಸ್ಟೊರೆಂಟ್ ಮಾಲೀಕರು

Webdunia
ಮಂಗಳವಾರ, 1 ಅಕ್ಟೋಬರ್ 2019 (16:35 IST)
ಪರವಾಣಿಗೆ ರಹಿತ ರೆಸ್ಟೋರೆಂಟ್ ಗಳಲ್ಲಿ ಮಧ್ಯಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಪಾರ್ಸಲ್ ಕೊಡಲು ಪರವಾನಿಗೆ ಇಲ್ಲದ ಅಂಗಡಿಗಳಲ್ಲಿ ನಾಮಫಲಕ ಹಾಕಿ ಪಾರ್ಸಲ್ ಕೊಡುತ್ತಿದ್ದಾರೆ. ಇದರಿಂದ ಕೋಟ್ಯಾಂತರ ಹಣ ಕರ್ಚು ಮಾಡಿ ಪರವಾನಿಗೆ ಪಡೆದ ರೆಸ್ಟೋರಂಟ್ ಮತ್ತು ಬಾರಗಳಿಗೆ ಬಾರಿ ಹೊಡೆತ ಬೀಳುತ್ತಿದೆ ಎಂಬ ಕೂಗು ಕೇಳಿಬರಲಾರಂಭಿಸಿದೆ.

ಕಾನೂನಿನ ಹೆಸರಲ್ಲಿ ಪ್ರವಾಸೋದ್ಯಮ ಮತ್ತು ಆಹಾರೋದ್ಯಮದ ಮೇಲೆ ಹಿಡಿತ ಸಾಧಿಸುತ್ತಿರುವುದರಿಂದ ಬೆಳಗಾವಿ  ಜಿಲ್ಲೆಯಲ್ಲಿಯಲ್ಲಿ ವ್ಯಾಪಾರ ವ್ಯವಹಾರಕ್ಕೆ ಭಾರಿ ಹೊಡೆತ ಬೀಳುತ್ತಿದೆ. ಹೀಗಂತ ಕರ್ನಾಟಕ ಪ್ರವಾಸೋದ್ಯಮ & ಹೊಟೇಲ್ ಮಾಲೀಕರ ಸಂಘವು ಕಳವಳ ವ್ಯಕ್ತಪಡಿಸಿದೆ.

ಬೆಳಗಾವಿ ಸಂಘದ ಅಧ್ಯಕ್ಷ ಉಮೇಶ ಬಾಳಿ ಮಾತನಾಡಿ, ರಾಜ್ಯ ಸರಕಾರದಿಂದ ನಡೆಸಲ್ಪಡುವ ಹಲವಾರು ಹಬ್ಬ, ಜಯಂತಿ ಆಚರಣೆಗಳ ಸಂದರ್ಭ ಜಿಲ್ಲಾಡಳಿತ ವರ್ಷಕ್ಕೆ ಕನಿಷ್ಠ 25 ರಿಂದ 30 dry day ಘೋಷಣೆ ಮಾಡಲಾಗುತ್ತಿದೆ. ಇದರಿಂದ ಉದ್ಯಮಕ್ಕೆ ಭಾರಿ ಹೊಡೆತ ಬಿಳುತ್ತಿದೆ. ಇತರ ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಕೊಡುವಷ್ಟು ಆದ್ಯತೆಯನ್ನು ನಮ್ಮ ರಾಜ್ಯದಲ್ಲಿ ಕೊಡದಿರುವುದು ವಿಷಾಧದ ಸಂಗತಿ.

ಪರವಾನಿಗೆ ರಹಿತ ರೆಸ್ಟೋರೆಂಟ್ ಗಳಲ್ಲಿ ಮಧ್ಯಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ ಮತ್ತು ಪಾರ್ಸಲ್ ಕೊಡಲು ಪರವಾನಿಗೆ ಇಲ್ಲದ ಅಂಗಡಿಗಳಲ್ಲಿ ನಾಮಫಲಕ ಹಾಕಿ ಪಾರ್ಸಲ್ ಕೊಡುತ್ತಿದ್ದಾರೆ. ಇದರಿಂದ ಕೋಟ್ಯಾಂತರ ಹಣ ಕರ್ಚು ಮಾಡಿ ಪರವಾಣಿಗೆ ಪಡೆದ ರೆಸ್ಟೋರಂಟ್ ಮತ್ತು ಬಾರಗಳಿಗೆ ಭಾರಿ ಹೊಡೆತ ಬೀಳುತ್ತಿದ್ದು, ಅಪಾರ ನಷ್ಟವಾಗುತ್ತಿದೆ ಎಂದು ಹೇಳಿದ್ದಾರೆ.

ಹೊಸ ವಾಹನ ಸಂಚಾರ ಕಾಯ್ದೆಯಲ್ಲಿ ಎಲ್ಲ ನಿಯಮಗಳ ಉಲ್ಲಂಘನೆಗೆ ದಂಡ ಇಳಿಸಲಾಗಿದೆ. ಆದರೂ ಮದ್ಯ ಸೇವಸಿ ವಾಹನ ಚಾಲನೆಯ ದಂಡ ಕಡಿಮೆ ಮಾಡದಿರುವುದರಿಂದಲೂ ವ್ಯಾಪಾರಕ್ಕೆ ತೊಂದರೆಯಾಗುತ್ತಿದೆ ಎಂದರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments