Select Your Language

Notifications

webdunia
webdunia
webdunia
webdunia

ಮದ್ಯದಂಗಡಿಗೆ ಹೋಗಿ ಲಕ್ಷ ಲಕ್ಷ ಹಣ ಕಳೆದುಕೊಂಡ

ಮದ್ಯದಂಗಡಿಗೆ ಹೋಗಿ ಲಕ್ಷ ಲಕ್ಷ ಹಣ ಕಳೆದುಕೊಂಡ
ದಾವಣಗೆರೆ , ಶುಕ್ರವಾರ, 20 ಸೆಪ್ಟಂಬರ್ 2019 (22:14 IST)
ಮದ್ಯದಂಗಡಿಗೆ ಚಿಲ್ಲರೆ ತರಲು ಹೋಗಿದ್ದ ವ್ಯಕ್ತಿಯೊಬ್ಬ ತನ್ನಲ್ಲಿದ್ದ ಲಕ್ಷ ಲಕ್ಷ ಹಣವನ್ನ ಕಳೆದುಕೊಂಡ ಘಟನೆ ನಡೆದಿದೆ.

ದಾವಣಗೆರೆ ನಗರದ ಪಿ ಬಿ ರಸ್ತೆಯ 180 ಎಂ ಆರ್ ಪಿ ಬಾರ್ ಬಳಿ ಘಟನೆ ನಡೆದಿದೆ.

ಹಳೆಕುಂದವಾಡ ಗ್ರಾಮದ ಎಚ್.ವಿರುಪಾಕ್ಷಪ್ಪ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದಾರೆ.
ಆಕ್ಸಿಸ್ ಬ್ಯಾಂಕ್ ನಲ್ಲಿ ಎರಡು ಲಕ್ಷ ಹಣ ಡ್ರಾ ಮಾಡಿದ್ದರು ವಿರುಪಾಕ್ಷಪ್ಪ. ಇದನ್ನು ನೋಡಿ ವಿರುಪಾಕ್ಷಪ್ಪರನ್ನು ಹಿಂಬಾಲಿಸಿದ್ದರು ಯುವಕರು.

ಪಿಬಿ ರಸ್ತೆಯ ಬಾರ್ ಬಳಿ ಬೈಕ್ ನಿಲ್ಲಿಸಿ ಚಿಲ್ಲರೆ ತರಲು ಬಾರ್ ಗೆ ಹೋಗಿದ್ದರು ವಿರುಪಾಕ್ಷಪ್ಪ.

ವಿರುಪಾಕ್ಷಪ್ಪ ಬಾರ್ ಒಳಗೆ ಹೋಗುತ್ತಿದ್ದಾಗ ಬೈಕ್ ಟ್ಯಾಂಕ್ ನಲ್ಲಿ ಹಣ ಇಟ್ಟಿದ್ದನ್ನ ನೋಡಿ ಹಣವನ್ನ ದೋಚಿದ್ದಾರೆ ದುಷ್ಕರ್ಮಿಗಳು.

ಹಣ ದೋಚುತ್ತಿರುವ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. 




Share this Story:

Follow Webdunia kannada

ಮುಂದಿನ ಸುದ್ದಿ

ಪೈಲ್ವಾನ್ ಪೈರಸಿಗೆ ಖಡಕ್ ಎಚ್ಚರಿಕೆ ಕೊಟ್ಟ ಸುದೀಪ್