Select Your Language

Notifications

webdunia
webdunia
webdunia
webdunia

ಹೋಟೆಲ್ ನಲ್ಲಿ ಊಟ ಮಾಡಿದವ್ರು ಸೇರಿದ್ರು ಕೈಲಾಸ

ಹೋಟೆಲ್ ನಲ್ಲಿ ಊಟ ಮಾಡಿದವ್ರು ಸೇರಿದ್ರು ಕೈಲಾಸ
ಬೆಂಗಳೂರು , ಮಂಗಳವಾರ, 27 ಆಗಸ್ಟ್ 2019 (16:55 IST)
ಹೋಟೆಲ್ ನಲ್ಲಿ ಊಟ ಮುಗಿಸಿಕೊಂಡು ಬೇಗ ಮನೆಗೆ ಹೋಗುವ ಅವಸರದಲ್ಲಿದ್ದವರು ಸಾವನ್ನಪ್ಪಿದ ಮನಕಲುಕುವ ಘಟನೆ ನಡೆದಿದೆ.

ರಾಂಗ್ ರೂಟ್ ನಲ್ಲಿ ಕಾರು ಚಲಾಯಿಸಿದ ಕುಟುಂಬಕ್ಕೆ ಟಿಪ್ಪರ್ ಲಾರಿ ಯಮರಾಯನ ರೂಪದಲ್ಲಿ ಆಗಮಿಸಿದ್ದು, ಒಂದೇ ಕುಟುಂಬದ ನಾಲ್ವರನ್ನು ಬಲಿ ಪಡೆದಿದೆ. ಇನ್ನಿಬ್ಬರ ಸ್ಥಿತಿ ಗಂಭೀರವಾಗಿ ಸಾವಿನ ದವಡೆಯಲ್ಲಿ ಹೋರಾಟ ನಡೆಸುತ್ತಿರುವಂತಹ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸರ್ಜಾಪುರದ ಬುರಗುಂಟೆ ಬಳಿ ನಡೆದಿದೆ.

ತಡರಾತ್ರಿ 2 ಗಂಟೆ ಸುಮಾರಿನಲ್ಲಿ ಟಿಪ್ಪರ್ ಲಾರಿಗೆ - ಕಾರು ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಉತ್ತರ ಪ್ರದೇಶ ಮೂಲದ 2 ವರ್ಷದ ಮಗು ಹಾಗೂ ಮೂವರು ಮೃತಪಟ್ಟಿದ್ದಾರೆ. 2 ವರ್ಷದ ಮಗು ಸೇರಿದಂತೆ ಮತ್ತೊಬ್ಬರು ಗಾಯಗೊಂಡಿದ್ದಾರೆ.

ಮೃತರನ್ನು ಅಂಜನಿ ಯಾದವ್ (29), ನೇಹಾ ಯಾದವ್ (28), ಸಂತೋಷ್ (30) ಹಾಗೂ 2 ವರ್ಷದ ಮಗು ದೃವ ಮೃತ ದುರ್ದೈವಿಗಳಾಗಿದ್ದಾರೆ. ಇನ್ನು ಅಪಘಾತದಲ್ಲಿ ಮತ್ತೊಂದು ಮಗು ಸಾನ್ವಿ(2) ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದೆ. ಈ ಮಗುವಿನ ತಂದೆ ಸಂತೋಷ್(29) ಗಂಭೀರ ಗಾಯಗಳೊಂದಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು ಮೃತ ಸಂತೋಷ್ ಕುಟುಂಬದ ಜೊತೆ ತನ್ನ ಸ್ನೇಹಿತನ ಕುಟುಂಬವನ್ನು ಕರೆದುಕೊಂಡು ಹೋಟೆಲ್ ಗೆ ಊಟಕ್ಕೆ ತೆರಳಿದ್ದರು. ತಡರಾತ್ರಿ ಸರ್ಜಾಪುರ ಬಳಿಯ ಡಿಎಕ್ಸ್ ಮ್ಯಾಕ್ಸ್ ಅಪಾರ್ಟ್ಮೆಂಟ್'ನ ತಮ್ಮ ಪ್ಲಾಟಿಗೆ ಹೊರಟಿದ್ದರು. ಬುರಗುಂಟೆ ಬಳಿ ಯು ಟರ್ನ್ ತೆಗೆದುಕೊಂಡು ರಾಂಗ್ ರೂಟಿನಲ್ಲಿ ಹೊರಟಿದ್ದಾರೆ. ಈ ಸಂದರ್ಭದಲ್ಲಿ ಎದುರಿಗೆ ಟಿಪ್ಪರ್ ಲಾರಿ ಬಂದಿದ್ದು ನೇರ ಲಾರಿಗೆ ಗುದ್ದಿದ ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ.  




Share this Story:

Follow Webdunia kannada

ಮುಂದಿನ ಸುದ್ದಿ

ಬೆಳೆ ಪರಿಹಾರ ಹಣದ ಚೆಕ್ ನೋಡಿ ದಂಗಾದ ರೈತ