Select Your Language

Notifications

webdunia
webdunia
webdunia
webdunia

ಎಚ್ ಡಿ ದೇವೇಗೌಡ, ಸಿಎಂ ಎಚ್ ಡಿಕೆ ವಿರುದ್ಧ ಜೆಡಿಎಸ್ ಮುಖಂಡರ ಅಸಮಾಧಾನ

ಎಚ್ ಡಿ ದೇವೇಗೌಡ, ಸಿಎಂ ಎಚ್ ಡಿಕೆ ವಿರುದ್ಧ ಜೆಡಿಎಸ್ ಮುಖಂಡರ ಅಸಮಾಧಾನ
ಬೆಂಗಳೂರು , ಮಂಗಳವಾರ, 23 ಅಕ್ಟೋಬರ್ 2018 (08:27 IST)
ಬೆಂಗಳೂರು: ಇತ್ತೀಚೆಗಿನ ರಾಜಕೀಯ ಬೆಳವಣಿಗೆಗಳಿಂದ ಕೆಲವು ಜೆಡಿಎಸ್ ಮುಖಂಡರು ತಮ್ಮ ಪಕ್ಷದ ವರಿಷ್ಠ ದೇವೇಗೌಡ ಮತ್ತು ಸಿಎಂ ಕುಮಾರಸ್ವಾಮಿ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರ ಜತೆ ದೇವೇಗೌಡರ ಸ್ನೇಹ ಹೆಚ್ಚಾಗುತ್ತಿರುವುದು, ಜೆಡಿಎಸ್ ನಾಯಕರನ್ನು ಕಡೆಗಣಿಸುತ್ತಿರುವುದು ಕೆಲವು ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.

ಇತ್ತೀಚೆಗಷ್ಟೇ ಸಿದ್ದರಾಮಯ್ಯ ಜತೆ ವೇದಿಕೆ ಹಂಚಿಕೊಂಡಿದ್ದಲ್ಲದೆ, ಅವರ ಜತೆ ಸ್ನೇಹ ಹಸ್ತ ಚಾಚಿರುವುದು, ಕಾಂಗ್ರೆಸ್ ನಾಯಕರನ್ನೇ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ನಾಯಕರನ್ನು ಕಡೆಗಣಿಸಿ ತಾವೇ ನಿರ್ಧಾರ ಕೈಗೊಳ್ಳುತ್ತಿರುವುದು ಜೆಡಿಎಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.

ಅಷ್ಟೇ ಅಲ್ಲದೆ, ಇತ್ತೀಚೆಗಷ್ಟೇ ಡಿಕೆ ಶಿವಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದಾಗ ಅಲ್ಲಿಗೇ ತೆರಳಿ ಆರೋಗ್ಯ ವಿಚಾರಿಸಿದ ಸಿಎಂ ಕುಮಾರಸ್ವಾಮಿ ತಮ್ಮದೇ ಪಕ್ಷದ ನಾಯಕರ ದುಃಖ ದುಮ್ಮಾನ ಕೇಳುತ್ತಿಲ್ಲ ಎಂದು ನಾಯಕರಲ್ಲಿ ಒಡಕು ಮೂಡಿಸಿದೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

420 ಎಂದು ಕರೆದ ಸಿದ್ದರಾಮಯ್ಯಗೆ ಬಿ ಶ್ರೀರಾಮುಲು ತಿರುಗೇಟು