Publish Date: Wed, 17 Oct 2018 (18:29 IST)
Updated Date: Wed, 17 Oct 2018 (18:31 IST)
ಮಂಡ್ಯ ಲೋಕಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ನಟ ಹಾಗೂ ಕೇಂದ್ರ ಮಾಜಿ ಸಚಿವ ಅಂಬರೀಷ್ ಅವರನ್ನು ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಭೇಟಿ ಮಾಡಿದರು.
ಮಂಡ್ಯ ಕ್ಷೇತ್ರದ ಉಪಚುನಾವಣೆಯ ಜೆಡಿಎಸ್ ಅಭ್ಯರ್ಥಿಯಾಗಿರುವ ಎಲ್.ಆರ್.ಶಿವರಾಮೇಗೌಡರು ಬೆಂಗಳೂರಿನ ಅಂಬರೀಷ್ ಫ್ಲಾಟ್ ನಲ್ಲಿ ಭೇಟಿ ಮಾಡಿದರು.
ಅಂಬರೀಶ್ ಮಂಡ್ಯ ಲೋಕಸಭೆಯಿಂದ ಸತತ ಮೂರು ಬಾರಿ ಸಂಸದರಾಗಿದ್ದರು. ತಮಗೆ ಚುನಾವಣೆ ಮಾಡಿಕೊಡುವಂತೆ ರೆಬಲ್ ಸ್ಟಾರ್ ಗೆ ಎಲ್ ಆರ್ ಎಸ್ ಮನವಿ ಮಾಡಿದರು.
ತಮ್ಮ ಬೆಂಬಲಿಗರಿಗೂ ಚುನಾವಣೆ ಮಾಡಲು ಹೇಳುವಂತೆ ಕೋರಿದ ಗೌಡರು, ಉಪಚುನಾವಣೆ ಕುರಿತು ಚರ್ಚೆ ನಡೆಸಿದರು.
ನಿಂತ ಎಲ್ಲಾ ಚುನಾವಣೆಯಲ್ಲೂ ಸೋತಿದ್ದೀಯಾ, ಈ ಚುನಾವಣೆಯಲ್ಲಾದರೂ ಗೆದ್ದು ಬಾ ಎಂದು ಅಂಬರೀಶ್ ಶುಭ ಹಾರೈಸಿದರು.