Select Your Language

Notifications

webdunia
webdunia
webdunia
webdunia

ಸಂಸದ ಉದಾಸಿ ಹೇಳಿಕೆಗೆ ವ್ಯಂಗ್ಯವಾಡಿದ್ದು ಹೇಗೆ ಗೊತ್ತಾ?

ಸಂಸದ ಉದಾಸಿ ಹೇಳಿಕೆಗೆ ವ್ಯಂಗ್ಯವಾಡಿದ್ದು ಹೇಗೆ ಗೊತ್ತಾ?
ಹಾವೇರಿ , ಮಂಗಳವಾರ, 1 ಜನವರಿ 2019 (19:50 IST)
ರೈತರ ಸಾಲವನ್ನ ಮಾಡುವುದಿಲ್ಲ ಎಂಬ ಸಂಸದ ಶಿವಕುಮಾರ ಉದಾಸಿ ಹೇಳಿಕೆಗೆ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.
ಹಾವೇರಿ ಜೆಡಿಎಸ್ ಜಿಲ್ಲಾಧ್ಯಕ್ಷ ಅಶೋಕ ಬೇವಿನಮರದ, ಸಂಸದರ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ಉದಾಸಿಯವರೇ ಮೊದಲು ನಿಮ್ಮ ಕ್ಷೇತ್ರದಲ್ಲಿ ಸ್ವಲ್ಪ ಓಡಾಡುವ ಪ್ರಯತ್ನ ಮಾಡಿ. ನಿಮ್ಮ ಕ್ಷೇತ್ರದಲ್ಲಿ ಏನೇನ್ ಸಮಸ್ಯೆ ಇದೆ ಎಂಬುದನ್ನ ಮೊದಲು ತಿಳಿಯಿರಿ ಎಂದು ಮೂದಲಿಸಿದ್ದಾರೆ.

ನಿಮ್ಮ ಕ್ಷೇತ್ರ ನೋಡಿಕೊಂಡ ನಂತರ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಿ.

ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡ್ತೇವಿ ಅಂತಾ ಸಿಎಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರೈತರ ಪರವಾದ ಸರಕಾರ ಅಂದ್ರೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಸರಕಾರ.

ಈ ಸರಕಾರ ರೈತರ ಪರವಾಗಿ ಕೆಲಸ ಮಾಡುತ್ತಿದೆ. ನಮ್ಮ ಬಗ್ಗೆ ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಮಾತನಾಡಿ ಎಂದು ತಿರುಗೇಟು ನೀಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ತುಮಕೂರು ಶ್ರೀ ಆರೋಗ್ಯವಾಗಿದ್ದಾರೆ ಎಂದ ಗೃಹಸಚಿವ