Select Your Language

Notifications

webdunia
webdunia
webdunia
webdunia

ಆ ದಂಪತಿ ಸಾವಿನ ಕಾರಣ ಕೇಳಿದ್ರೆ ಕಣ್ಣೀರು ಹಾಕುತ್ತೀರಿ

ಆ ದಂಪತಿ ಸಾವಿನ ಕಾರಣ ಕೇಳಿದ್ರೆ ಕಣ್ಣೀರು ಹಾಕುತ್ತೀರಿ
ಬೆಳಗಾವಿ , ಬುಧವಾರ, 22 ಮೇ 2019 (13:55 IST)
ಈ ದಂಪತಿ ಸಾವಿನ ಹಿಂದೆ ಇರುವ ಕಾರಣ ಕೇಳಿದರೆ ನೀವು ನಿಜವಾಗಲೂ ಕಣ್ಣೀರು ಹಾಕುವಿರಿ.

ದಂಪತಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೇಲ್ವೆ ಹಳಿಗೆ ತೆಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಲಕ್ಷ್ಮಣ ಗೂಟಗೊಡ್ಡಿ, ರೇಣುಕಾ ಗೂಟಗೊಡ್ಡಿ ದಂಪತಿ ಸಾವಿಗೆ ಶರಣಾದವರು. ಮೂಲತಃ ಬೆಳಗಾವಿ ಜಿಲ್ಲೆ ಹುಕ್ಕೆರಿ ತಾಲೂಕಿನ ಕರಗೊಪ್ಪಿ ಗ್ರಾಮದ ನಿವಾಸಿಗಳು ಈ ದಂಪತಿ. 

ತುತ್ತಿನ ಚೀಲ ತುಂಬಿಸಿಕೊಳ್ಳಲು ಬೆಳಗಾವಿಗೆ ಆಗಮಿಸಿದ ದಂಪತಿಗಳು ಬಡತನದ ಬೇಗೆ ತಾಳದೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.  

ಬೆಳಗಾವಿ ಎ.ಪಿ.ಎಂ.ಸಿ ಯಲ್ಲಿ ಹಮಾಲಿ ‌ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ದಂಪತಿ. ಇಂದು ಬೆಳಗಿನ ಜಾವ ರೇಲ್ವೆಗೆ ತಲೆಕೊಟ್ಟು ಸಾವಿಗೆ ಶರಣಾಗಿದ್ದಾರೆ. ಆದರೆ ಸಂಬಂಧಿಕರು ಮಾತ್ರ ಇದು ಆತ್ಮಹತ್ಯೆ ಅಲ್ಲಾ ಕೊಲೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಮಾಳಮಾರುತಿ  ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ರೋಷನ್ ಬೇಗ್ ಪರ ಬ್ಯಾಟ್ ಬೀಸಿದ ವಿಶ್ವನಾಥ್?