Select Your Language

Notifications

webdunia
webdunia
webdunia
webdunia

ಪ್ರಿಯತಮೆ ಮೇಲಿನ ಕೋಪಕ್ಕೆ ಪ್ರಾಣವನ್ನೇ ಕಳೆದುಕೊಂಡ ಯುವಕ

ಪ್ರಿಯತಮೆ ಮೇಲಿನ ಕೋಪಕ್ಕೆ ಪ್ರಾಣವನ್ನೇ ಕಳೆದುಕೊಂಡ ಯುವಕ
ಮೈಸೂರು , ಶನಿವಾರ, 18 ಮೇ 2019 (09:59 IST)
ಮೈಸೂರು : ಪ್ರಿಯತಮೆ ಮೋಸ ಮಾಡಿದ  ಹಿನ್ನಲೆಯಲ್ಲಿ ಪ್ರಿಯಕರನೊಬ್ಬ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಸುವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.




ಸಿದ್ದರಾಜು (22) ಆತ್ಮಹತ್ಯೆ ಮಾಡಿಕೊಂಡ ಪ್ರಿಯತಮ. ಮೈಸೂರಿನ ಬೆಳವಾಡಿಯ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಸಿದ್ದರಾಜು, ಬೆಳವಾಡಿಯ ಯುವತಿಯನ್ನು ಪ್ರೀತಿಸುತ್ತಿದ್ದನು. ಇಬ್ಬರ ಮದುವೆಗೆ ಯುವತಿಯ ಪೋಷಕರ ವಿರೋಧ ಇತ್ತು. ಆದ ಕಾರಣ ಆತನ ಪ್ರಿಯತಮೆ ಪೋಷಕರು ತೋರಿಸಿದ ಯುವಕನ ಜೊತೆ ಮದುವೆಗೆ ಮುಂದಾಗಿದ್ದಳು.


ಇದನ್ನು ವಿರೋಧಿಸಿದ ಪ್ರಿಯತಮ ಸಿದ್ದರಾಜುಗೆ ಆಕೆ ವಿಷ ಕೊಟ್ಟು ತನ್ನ ಸಾವಿಗೆ ತಾನೇ ಕಾರಣವೆಂದು ಡೆತ್ ನೋಟ್ ಬರೆದಿಟ್ಟು ಸಾಯುವಂತೆ ಪ್ರೇರೆಪಿಸಿದ್ದಾಳೆ. ಇದರಿಂದ ನೊಂದ ಸಿದ್ದರಾಜು ನನ್ನ ಸಾವಿಗೆ ತನ್ನ ಪ್ರಿಯತಮೆ ಹಾಗೂ ಆಕೆಯ ತಾಯಿ ಸವಿತಾ ಹಾಗೂ ಅಜ್ಜಿ ಕಾರಣ ಎಂದು ಸೆಲ್ಫಿ ವಿಡಿಯೋ ಮಾಡಿ  ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ಮನ್ ಕೀ ಬಾತ್ ನ ಕೊನೆಯ ಎಪಿಸೋಡ್ ನೋಡ್ರಪ್ಪಾ.. ಮೋದಿಗೆ ಅಖಿಲೇಶ್ ಯಾದವ್ ಟಾಂಗ್