Select Your Language

Notifications

webdunia
webdunia
webdunia
webdunia

ನಾನು ಕಮಲ ಪಕ್ಷದ ಸಾಹುಕಾರ್ ಎಂದ ರಮೇಶ್ ಜಾರಕಿಹೊಳಿ

ನಾನು ಕಮಲ ಪಕ್ಷದ ಸಾಹುಕಾರ್ ಎಂದ ರಮೇಶ್ ಜಾರಕಿಹೊಳಿ
ಬೆಳಗಾವಿ , ಶುಕ್ರವಾರ, 22 ನವೆಂಬರ್ 2019 (10:37 IST)
ಬೆಳಗಾವಿ :ಇಂದು ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಬೆಳಗಾವಿ ಜಿಲ್ಲೆಯ ಗೋಕಾಕ್ ನ ಖನಗಾಂವ ಗ್ರಾಮದಲ್ಲಿ ಚುನಾವಣಾ ಪ್ರಚಾರ ಮಾಡಿದ್ದಾರೆ.



ಈ ವೇಳೆ ಮತದಾರರೊಂದಿಗೆ ಮಾತನಾಡಿದ ರಮೆಶ್ ಜಾರಕಿಹೊಳಿ, ನಾನು 5 ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದೇನೆ. ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದು ಕಮಲ ಚಿಹ್ನೆಗೆ ಮತ ಹಾಕಿ. ನಮ್ಮ ಕ್ಷೇತ್ರದ ಜನರ ತಲೆಯಲ್ಲಿ ಹಸ್ತದ ಗುರುತು ಇದೆ. ಕಮಲ ಚಿಹ್ನೆಗೆ ಮತ ನೀಡುವಂತೆ ಯುವಕರು ಟ್ರೈನಿಂಗ್ ಕೊಡಬೇಕು ಎಂದು ಹೇಳಿದ್ದಾರೆ.


ಅಲ್ಲದೇ ನಾನು ಕಮಲ ಪಕ್ಷದ ಸಾಹುಕಾರ್, ನನಗೆ ವೋಟ್ ಹಾಕಿ. ಕಾಂಗ್ರೆಸ್ ಪಕ್ಷದಲ್ಲಿ ಒಬ್ಬ ಸಾಹುಕಾರ್ ಇದ್ದಾನೆ ಹುಷಾರ್.   ವಿರೋಧಿಗಳು ಅನರ್ಹರು, ನೈತಿಕತೆ ಇಲ್ಲ ಅಂತ ಅಪಮಾನ ಮಾಡ್ತಿದ್ದಾರೆ. ಅವರಿಗೆ ಪ್ರಚಂಡ ಬಹುಮತದಿಂದ ಗೆದ್ದು ಉತ್ತರ ನೀಡಬೇಕು ಎಂದು ಅವರು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಉದ್ಧವ್ ಠಾಕ್ರೆಯೇ ಮಹಾರಾಷ್ಟ್ರಕ್ಕೆ ನೂತನ ಸಿಎಂ: ತಡರಾತ್ರಿವರೆಗೂ ನಡೆದ ಮೀಟಿಂಗ್