Webdunia - Bharat's app for daily news and videos

Install App

ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ತಿದ್ದಲು ಇಂದಿನಿಂದಲೇ ಅವಕಾಶ: ಸರಿಪಡಿಸುವುದು ಹೇಗೆ ಇಲ್ಲಿದೆ ಡೀಟೈಲ್ಸ್

Krishnaveni K
ಸೋಮವಾರ, 25 ನವೆಂಬರ್ 2024 (10:38 IST)
ಬೆಂಗಳೂರು: ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ಪರಿಷ್ಕರಣೆಗೆ ಮುಂದಾಗಿದ್ದರಿಂದ ಹಲವರು ಅರ್ಹರೂ ಬಿಪಿಎಲ್ ಕಾರ್ಡ್ ಕಳೆದುಕೊಂಡಿದ್ದಾರೆ. ಇದೀಗ ಆ ಎಡವಟ್ಟು ಸರಿಪಡಿಸಲು ಸರ್ಕಾರ ಮುಂದಾಗಿದ್ದು ಇಂದಿನಿಂದ ಆ ಕೆಲಸ ಶುರುವಾಗಲಿದೆ.

 
ಇಂದಿನಿಂದ ರದ್ದಾಗಿರುವ ಬಿಪಿಎಲ್ ಕಾರ್ಡ್ ಮರುಪರಿಶೀಲಿಸಿ ಅನರ್ಹರಿಗೆ ಕತ್ತರಿ ಹಾಕಿ, ಅರ್ಹರಿಗೆ ಮತ್ತೆ ಬಿಪಿಎಲ್ ಕಾರ್ಡ್ ವಿತರಿಸಲಾಗುತ್ತದೆ. ಮುಖ್ಯಮಂತ್ರಿಗಳ ಸೂಚನೆ ಬೆನ್ನಲ್ಲೇ ಆಹಾರ ಇಲಾಖೆ ರದ್ದಾಗಿರುವ ಅರ್ಹರಿಗೆ ಮತ್ತೆ ವಿತರಿಸಲು ಮುಂದಾಗಿದೆ.

ತಿದ್ದುಪಡಿ ಮಾಡುವುದು ಎಲ್ಲಿ?
ಒಂದು ವೇಳೆ ನೀವು ಅರ್ಹರಾಗಿದ್ದೂ ಬಿಪಿಎಲ್ ಕಾರ್ಡ್ ರದ್ದಾಗಿದ್ದಲ್ಲಿ ಸಮೀಪದ ಆಹಾರ ಇಲಾಖೆ ಕೇಂದ್ರಕ್ಕೆ ತೆರಳಿ ಸರಿಪಡಿಸಬೇಕು. ಬೆಂಗಳೂರಿನಲ್ಲಿ ಪೂರ್ವ ವಲಯದವರಿಗೆ ರಾಜಾಜಿನಗರ, ಪಶ್ಚಿಮ ವಲಯಕ್ಕೆ ಬಸವನಗುಡಿ, ಉತ್ತರ ವಲಯ ಮೆಜೆಸ್ಟಿಕ್, ಕೆಂಗೇರಿ ಮತ್ತು ಬನಶಂಕರಿ, ಆರ್ ಟಿ ನಗರ ಆಹಾರ ಇಲಾಖೆ ಕಚೇರಿ,ವಯ್ಯಾಲಿಕಾವಲ್ ಮತ್ತು ಯಲಹಂಕ ಆಹಾರ ಇಲಾಖೆ ಕಚೇರಿಯಲ್ಲಿ ಸರಿಪಡಿಸಲಾಗುತ್ತದೆ.

ಯಾವೆಲ್ಲಾ ದಾಖಲೆ ಬೇಕು?
ಆಧಾರ್ ಕಾರ್ಡ್
ರೇಷನ್ ಕಾರ್ಡ್
ಐಟಿ ರಶೀದಿ

ಒಂದು ವೇಳೆ ನಿಮ್ಮ ಆದಾಯ ಮಿತಿ ಹೆಚ್ಚಿದ್ದರೆ ಬಿಪಿಎಲ್ ಕಾರ್ಡ್ ರದ್ದತಿ ಮುಂದುವರಿಯಲಿದೆ. ಇಲ್ಲದೇ ಹೋದರೆ ಮರಳಿ ಬಿಪಿಎಲ್ ಕಾರ್ಡ್ ಸಿಗಲಿದೆ. ಪ್ರತಿಯೊಬ್ಬರ ಕಾರ್ಡ್ ಪರಿಶೀಲನೆ ನಡೆಸಿ ಬಿಪಿಎಲ್ ಗೆ ಅರ್ಹರೋ, ಅನರ್ಹರೋ ಎಂದು ತೀರ್ಮಾನಿಸಲಾಗುತ್ತದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Mallikarjun Kharge video: ಭಾಷಣದ ನಡುವೆ ನಮ್ಮ ಪಾಕಿಸ್ತಾನ ಎಂದ ಮಲ್ಲಿಕಾರ್ಜುನ ಖರ್ಗೆ: ಟ್ರೋಲ್

Gold Price Today: ಚಿನ್ನದ ಖರೀದಿದಾರರಿಗೆ ಇಂದು ಶಾಕ್

Video: ಕನ್ನಡ ಮಾತನಾಡಲ್ಲ ಎಂದಿ ಧಿಮಾಕು ತೋರಿದ್ದ SBI ಸಿಬ್ಬಂದಿ: ಈಗ ವರಸೆಯೇ ಬದಲು

Booker Award: ಕನ್ನಡದ ಪ್ರಸಿದ್ಧ ಸಾಹಿತಿ ಬಾನು ಮುಷ್ತಾಕ್ ಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ

Pakistan ದಲ್ಲಿ ಮತ್ತೆ ಅಜ್ಞಾತ ಶೂಟರ್ ಕರಾಮತ್ತು: ಲಷ್ಕರ್ ಉಗ್ರನಿಗೆ ಮನೆಯೊಳಗೇ ನುಗ್ಗಿ ಗುಂಡು video

ಮುಂದಿನ ಸುದ್ದಿ
Show comments