Select Your Language

Notifications

webdunia
webdunia
webdunia
webdunia

Karnataka Weather, ಬೆಳ್ತಂಗಡಿಯಲ್ಲಿ ಆಲಿಕಲ್ಲು ಮಳೆ: ಬಿಸಿಲ ಬೇಗೆಗೆ ಸುಸ್ತಾಗಿದ್ದ ಜನತೆಗೆ ತಂಪೆರೆದ ವರುಣ

Karnataka Weather Today, Dakshina Kannada Rain, Bangalore Rain

Sampriya

ಬೆಳ್ತಂಗಡಿ , ಸೋಮವಾರ, 14 ಏಪ್ರಿಲ್ 2025 (15:08 IST)
ಬೆಳ್ತಂಗಡಿ: ಹವಾಮಾನ ಇಲಾಖೆ ಮುನ್ಸೂಚನೆಯಂತೆ ಇಂದು ದಕ್ಷಿಣ ಕನ್ನಡದ ಹಲೆವೆಡೆ ಗಾಳಿ, ಸಿಡಿಲು ಸಹಿತ ಆಲಿಕಲ್ಲು ಮಳೆಯಾಗುತ್ತಿದೆ. ಬೆಳಗ್ಗೆಯಿಂದ ಉರಿಬಿಸಿಲನ ವಾತಾವರಣದಿಂದ ಸುಸ್ತಾಗಿದ್ದ ಜನತೆಗೆ ಇದೀಗ ವರುಣ ತಂಪೆರೆದಿದ್ದಾನೆ.

ಕರಾವಳಿ ಭಾಗ ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆಯಾಗುವ ಮುನ್ಸೂಚನೆಯಂತೆ ಹವಾಮಾನ ಇಲಾಖೆ ನೀಡಿತ್ತು. ಅದರಂತೆ ಇದೀಗ ಮಳೆಯಾಗುತ್ತಿದೆ.

ಬೆಳ್ತಂಗಡಿ ತಾಲ್ಲೂಕಿನ ಬೆಳ್ತಂಗಡಿ ಆಸುಪಾಸಿನ ಗ್ರಾಮಗಳು, ನಾರಾವಿ, ಅಂಡಿಂಜೆ ಮೊದಲಾದ ಕಡೆಗಳಲ್ಲಿ ಗಾಳಿ ಹಾಗೂ ಗುಡುಗು ಸಿಡಿಲಿನಿಂದ ಕೂಡಿದ ಮಳೆಯಾಗಿದೆ. ಗಾಳಿಯ ಅಬ್ಬರವೂ ಜೋರಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಬುಧವಾರ ದಿನವಿಡಿ ವಿಪರೀತ ಬಿಸಿಲಿನಿಂದ ಕೂಡಿದ ವಾತಾವರಣದಿಂದ ಜನ ಮನೆಯಿಂದ ಹೊರಬರಲು ಹಿಂದೇಟು ಹಾಕಿದ್ದರು.

ಬೆಳ್ತಂಗಡಿ ತಾಲ್ಲೂಕಿನ ಕಾಶಿಪಟ್ಣದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ.






Share this Story:

Follow Webdunia kannada

ಮುಂದಿನ ಸುದ್ದಿ

ಕಾಡಿನಿಂದ ಜೇನು ಸಂಗ್ರಹಿಸಿ ವಾಪಾಸ್ಸಾಗುತ್ತಿದ್ದ ಬುಡಕಟ್ಟು ಯುವಕನ ಮೇಲೆ ಆನೆ ದಾಳಿ, ಸಾವು