Publish Date: Sat, 15 Apr 2023 (16:03 IST)
Updated Date: Sat, 15 Apr 2023 (16:06 IST)
ವಿಜಯಪುರದಲ್ಲಿ ರಾಜಕೀಯ ರಂಗೇರಿದ್ದು, ಶಾಸಕರ ಗೆಲುವಿಗಾಗಿ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ.. ಬಸವನ ಬಾಗೇವಾಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ಗೆಲುವು ಸಾಧಿಸುವಂತೆ ಪ್ರಾರ್ಥಿಸಿ ಅಭಿಮಾನಿಗಳು ದೀಡ್ ನಮಸ್ಕಾರ ಹಾಕಿದ್ದಾರೆ.. ತಾಲೂಕಿನ ಟಕ್ಕಳಕಿ ಗ್ರಾಮದಿಂದ ನಂದೀಶ್ವರ ದೇವಸ್ಥಾನದವರೆಗೆ ದೀಡ್ ನಮಸ್ಕಾರ ಹಾಕಿ ಹರಕೆ ಹೊತ್ತಿದ್ದಾರೆ.. ಸುಮಾರು 16 ಜನ ಅಭಿಮಾನಿಗಳಿಂದ ದೀಡ್ ನಮಸ್ಕಾರ ಹಾಕಿದ್ದು, ಹಲಗೆ ಮೆರವಣೆಗೆಯೊಂದಿಗೆ ಆಗಮಿಸಿದ್ದಾರೆ.. ಅಭಿಮಾನಿಗಳು ಶಾಸಕರಿಗೆ ಶುಭ ಹಾರೈಸಿದ್ದಾರೆ.