Select Your Language

Notifications

webdunia
webdunia
webdunia
webdunia

ಜಾತಿ ಪ್ರಮಾಣ ಪತ್ರ ಕೊಟ್ಟು ಬಿಡಿ ಎಂದ ಸರಕಾರ

ಜಾತಿ ಪ್ರಮಾಣ ಪತ್ರ ಕೊಟ್ಟು ಬಿಡಿ ಎಂದ ಸರಕಾರ
ಬೆಂಗಳೂರು , ಶುಕ್ರವಾರ, 24 ಏಪ್ರಿಲ್ 2020 (14:01 IST)
ಕೊರೊನಾ ಸೋಂಕು ನಿಯಂತ್ರಣ ಕ್ಕಾಗಿ ಜಾರಿಯಲ್ಲಿರುವ  ಲಾಕ್ ಡೌನ್ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಜಾತಿ ಪ್ರಮಾಣ ಪತ್ರಗಳನ್ನು ವಿತರಣೆ ಮಾಡುತ್ತಿಲ್ಲ.

ಈ ಬಗ್ಗೆ ದೂರುಗಳು ಬಂದಿದ್ದು, ಅರ್ಹ  ಆಂಕಾಕ್ಷಿ ಫಲಾನುಭವಿಗಳಿಗೆ  ಜಾತಿ ಪ್ರಮಾಣ ಪತ್ರಗಳನ್ನು ವಿತರಿಸಲು ಕ್ರಮಕೈಗೊಳ್ಳುವಂತೆ  ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಸೂಚಿಸಿದ್ದಾರೆ.

ಆರೋಗ್ಯ ತಪಾಸಣೆ, ಶಸ್ತ್ರಚಿಕಿತ್ಸೆ ಗೊಳಪಡುವ ಫಲಾನುಭವಿಗಳು,  ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ಜಾತಿ ಪ್ರಮಾಣ ಪತ್ರದ ಕೊರತೆಯಿಂದ ತೊಂದರೆಗೊಳಗಾಗಿದ್ದಾರೆ. ಅರ್ಹ ಆಕಾಂಕ್ಷಿ ಫಲಾನುಭವಿಗಳಿಗೆ ಜಾತಿ ಪ್ರಮಾಣ ಪತ್ರಗಳನ್ನು ವಿತರಿಸಲು ರಾಜ್ಯದ ಎಲ್ಲಾ ತಹಶಿಲ್ದಾರರಿಗೆ ನಿರ್ದೇಶಿಸುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಾಸಾದ್ ಅವರಿಗೆ ಡಿಸಿಎಂ ಸೂಚಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಐವರು ಪುಂಡರಿಗೆ ಕೊರೊನಾ ವೈರಸ್ : ಬೆಚ್ಚಿಬಿದ್ದ ಪಾದರಾಯನಪುರ