Publish Date: Fri, 31 Jan 2020 (17:50 IST)
Updated Date: Fri, 31 Jan 2020 (17:53 IST)
ಬಿ.ಎಸ್.ಯಡಿಯೂರಪ್ಪ ನಾಲ್ಕು ಸಲ ರಾಜ್ಯದ ಮುಖ್ಯಮಂತ್ರಿಯಾಗಿದ್ದರೂ ಇದೀಗ ಪಕ್ಷದ ಹೈಕಮಾಂಡ್ ಬೋನಿನಲ್ಲಿದ್ದಾರೆ.
ಹೀಗಂತ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ವ್ಯಂಗ್ಯವಾಡಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಬಿಜೆಪಿಯವರಿಗೆ ಬಿಟ್ಟ ವಿಷಯ. ಆದರೆ ರಾಜ್ಯದ ಅಭಿವೃದ್ಧಿ ಹಿತಕ್ಕಾಗಿ ಆದಷ್ಟು ಬೇಗ ರಚನೆ ಮಾಡಬೇಕೆಂದು ಒತ್ತಾಯ ಮಾಡಿದ್ರು.
ರಾಜಾ ಹುಲಿಯನ್ನು ಬಿಜೆಪಿ ಹೈಕಮಾಂಡ್ ನವರು ಬೋನಲ್ಲೇ ಹಿಡಿದಿಟ್ಟಿದ್ದಾರೆ. ಸಿಎಂ ಕೆಲಸ ಮಾಡಲು ಬಿಡ್ತಿಲ್ಲ ಅಂತ ಟೀಕೆ ಮಾಡಿದ್ರು.