Select Your Language

Notifications

webdunia
webdunia
webdunia
webdunia

17 ಜನರಿಗೂ ಸಚಿವ ಸ್ಥಾನವನ್ನು ನೀಡಬೇಕು- ಮಿತ್ರಮಂಡಳಿ ಸದಸ್ಯರ ಪರ ಜೆಡಿಎಸ್ ಶಾಸಕರು ಬ್ಯಾಟಿಂಗ್

17 ಜನರಿಗೂ ಸಚಿವ ಸ್ಥಾನವನ್ನು ನೀಡಬೇಕು- ಮಿತ್ರಮಂಡಳಿ ಸದಸ್ಯರ ಪರ ಜೆಡಿಎಸ್ ಶಾಸಕರು ಬ್ಯಾಟಿಂಗ್
ಬೆಂಗಳೂರು , ಶುಕ್ರವಾರ, 31 ಜನವರಿ 2020 (10:57 IST)
ಬೆಂಗಳೂರು : 17 ಜನರಿಗೂ ಸಚಿವ ಸ್ಥಾನವನ್ನು ನೀಡಬೇಕೆಂದು ಒತ್ತಾಯಿಸಿ ಮಿತ್ರಮಂಡಳಿ ಸದಸ್ಯರ ಪರ ಜೆಡಿಎಸ್ ಶಾಸಕರು ಬ್ಯಾಟಿಂಗ್ ಮಾಡಿದ್ದಾರೆ.

ಶ್ರೀರಂಗಪಟ್ಟಣದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ  ಹಾಗೂ ನಾಗಮಂಗಲ ಕ್ಷೇತ್ರದ ಜೆಡಿಎಸ್ ಶಾಸಕ ಸುರೇಶ್ ಗೌಡರು ಮಿತ್ರ ಮಂಡಳಿ ಸದಸ್ಯರ ಪರ ನಿಂತಿದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರ ಬೀಳಿಸಿದ್ದರು. ಮೈತ್ರಿ  ಸರ್ಕಾರ ಬೀಳಿಸಿದ 17 ಜನರಿಗೂ ಸಚಿವ ಸ್ಥಾನ ನೀಡಿ . 17 ಜನರಿಗೂ ಸಚಿವ ಸ್ಥಾನ ನೀಡುವುದಾಗಿ ಹೇಳಿದ್ದರು. ಸಿಎಂ ಯಡಿಯೂರಪ್ಪ ಮಾತು ಕೊಟ್ಟಿದ್ದರು ಎಂದು ಹೇಳಿದ್ದಾರೆ.

 

ಆದರೆ ಈಗ ಕೆಲವರಿಗಷ್ಟೇ ಸಚಿವ ಸ್ಥಾನ ಎಂದು ಹೇಳಲಾಗುತ್ತಿದೆ. ಕೊಟ್ಟ ಮಾತಿನಂತೆ 17 ಜನರನ್ನೂ ಮಂತ್ರಿ ಮಾಡಬೇಕು. ಈಗ ಮಾತು ತಪ್ಪಿದರೆ ಅಪಕೀರ್ತಿಗೆ ಒಳಗಾಗಬೇಕಾಗುತ್ತದೆ. ಸೋತಿರುವ ಎಂಟಿಬಿ ಮತ್ತು ವಿಶ್ವನಾಥ್ ಗೂ ಸಚಿವ ಸ್ಥಾನ ನೀಡಬೇಕು ಎಂದು ಈ ಇಬ್ಬರು ಜೆಡಿಎಸ್ ಶಾಸಕರು ಮಿತ್ರ ಮಂಡಳಿ ಸದಸ್ಯರ ಪರ ನಿಂತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ನೆರೆ ಸಂತ್ರಸ್ತರಿಗೆ ರಾಜ್ಯ ಬಿಜೆಪಿ ಸರ್ಕಾರ ನೀಡಿದ್ದ ಚೆಕ್ ಬೌನ್ಸ್