Select Your Language

Notifications

webdunia
webdunia
webdunia
webdunia

ಅಮಿತ್ ಶಾ , ಸಿಎಂ ಭೇಟಿ ಇನ್ನೂ ಫೈನಲ್ ಆಗದ ಹಿನ್ನಲೆ; ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗುವುದು ಅನುಮಾನ

ಅಮಿತ್ ಶಾ , ಸಿಎಂ ಭೇಟಿ ಇನ್ನೂ ಫೈನಲ್ ಆಗದ ಹಿನ್ನಲೆ; ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗುವುದು ಅನುಮಾನ
ಬೆಂಗಳೂರು , ಶುಕ್ರವಾರ, 31 ಜನವರಿ 2020 (11:05 IST)
ಬೆಂಗಳೂರು : ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ  ಅಮಿತ್ ಶಾ , ಸಿಎಂ ಭೇಟಿ ಇನ್ನೂ ಫೈನಲ್ ಆಗದ ಹಿನ್ನಲೆಯಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುವುದು ಅನುಮಾನ ಎನ್ನಲಾಗಿದೆ.

ಇಂದು ಬೆಳಿಗ್ಗೆ  9.30 ರಿಂದ 10 ಗಂಟೆಗೆ ಅಮಿತ್ ಶಾ ಭೇಟಿಗೆ ಸಮಯ ನಿಗದಿಯಾಗಿತ್ತು, ಬಳಿಕ ಕರೆ ಮಾಡಿ ಭೇಟಿ ಸಮಯ ಬದಲಿಸಿದ್ದ ಅಮಿತ್ ಶಾ ಮಧ್ಯಾಹ್ನ 2 ರಿಂದ 3 ಗಂಟೆಗೆ ಭೇಟಿಗೆ ಸಮಯ ನೀಡಿದ್ದರು. ಆದರೆ ಈಗ ಮತ್ತೆ ಅಮಿತ್ ಶಾ ಕಾರ್ಯಕ್ರಮದ ಪಟ್ಟಿ ಬದಲಾವಣೆಯಾದ ಕಾರಣ ಅಮಿತ್ ಶಾ ಭೇಟಿಗೆ ಬಿಎಸ್ ವೈ ಗೆ ಅವಕಾಶ ಸಿಗುವುದೇ ಅನುಮಾನ ಎನ್ನಲಾಗಿದೆ.

 

ಬೆಳಿಗ್ಗೆ 11 ಗಂಟೆಗೆ ಅಮಿತ್ ಶಾ ಸಂಸತ್ ಜಂಟಿ ಅಧಿವೇಶನದಲ್ಲಿ ಭಾಗಿಯಾಗಲಿದ್ದು ಮಧ್ಯಾಹ್ನ 2 ಗಂಟೆಗೆ ಬಿಜೆಪಿ ಕಾರ್ಯಕಾರಿ ಸಮಿತಿ ಸಭೆ ನಡೆಸಲಿದ್ದಾರೆ. ನಂತರ ಮಧ್ಯಾಹ್ನ 3.30ಕ್ಕೆ ಎನ್ ಡಿಎ ಮೈತ್ರಿಕೂಟದ ಸಭೆ ನಂತರ ದೆಹಲಿ ಚುನಾವಣಾ ಪ್ರಚಾರದಲ್ಲಿ ಅಮಿತ್ ಶಾ ಭಾಗಿಯಾಗಲಿದ್ದಾರೆ. ಹೀಗಾಗಿ ಅಮಿತ್ ಶಾ ಭೇಟಿಗಾಗಿ ಬಿಎಸ್ ವೈ ಕರ್ನಾಟಕ ಭವನದಲ್ಲೇ ಕಾದು ಕುಳಿತಿದ್ದಾರೆ ಎನ್ನಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ಸ್ಥಾನಕ್ಕಾಗಿ ಶಾಸಕ ಎ.ಎಸ್ ಪಾಟೀಲ್ ನಡವಳ್ಳಿ ಲಾಬಿ