Publish Date: Thu, 10 Feb 2022 (09:20 IST)
Updated Date: Thu, 10 Feb 2022 (09:32 IST)
ಮಂಡ್ಯ: ವಿವಾಹಿತ ಪುರುಷನ ಅಕ್ರಮ ಸಂಬಂಧದಿಂದಾಗಿ ಆತನ ಪತ್ನಿ ಮತ್ತು ಮೂವರು ಮಕ್ಕಳು ಪ್ರಾಣ ಕಳೆದುಕೊಳ್ಳಬೇಕಾದ ಸ್ಥಿತಿ ಬಂದಿದೆ.
ವಿವಾಹಿತ ವ್ಯಕ್ತಿಗೆ ಲಕ್ಷ್ಮಿ ಎಂಬಾಕೆಯೊಂದಿಗೆ ಅಕ್ರಮ ಸಂಬಂಧವಿತ್ತು. ಈಕೆ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಳು. ಆದರೆ ಅತ್ತ ಹೆಂಡತಿ ಮಕ್ಕಳನ್ನೂ ಬಿಡಲಾಗದೇ ಇತ್ತ ಲವ್ವರ್ ಗೂ ಕೈ ಕೊಡಲಾಗದೇ ಗಂಡ ಒದ್ದಾಡುತ್ತಿದ್ದ.
ಈ ವೇಳೆ ಲಕ್ಷ್ಮಿ ತಾನೇ ಪ್ರೇಮಿಯ ಮನೆಗೆ ಬಂದು ಆತನ ಪತ್ನಿ ಹಾಗೂ ಮಕ್ಕಳಿಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿ ಏನೂ ಗೊತ್ತಿಲ್ಲದವಳಂತೆ ನಾಟಕವಾಡಿದ್ದಾಳೆ. ಆದರೆ ವಿಚಾರಣೆಯಿಂದ ಸತ್ಯ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.