Select Your Language

Notifications

webdunia
webdunia
webdunia
webdunia

ಲೋಕವೆಲ್ಲಾ ಹುಚ್ಚರ ಸಂತೆ ಎಂದ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ

ಈಶ್ವರಪ್ಪ
ಶಿವಮೊಗ್ಗ :ಟೀಕೆ ಮಾಡುವಾಗ ವೈಯಕ್ತಿಯ ವಿಷಯಗಳ ಬಗ್ಗೆ ಪ್ರಸ್ತಾಪಿಸುವುದು ಸರಿಯಲ್ಲ ಎಂದು ಹೇಳಿದ ಕೆ.ಎಸ್‌. ಈಶ್ವರಪ್ಪ, ರಾಜಕಾರಣಿಗಳು ಈ ಹುಚ್ಚಾಟವನ್ನು ಬಿಡಬೇಕು ಎಂದು ಅನಂತ್‌ ಕುಮಾರ್‌ ಹೆಗಡೆ ಅವರ ಕಿವಿ ಹಿಂಡಿದ್ದಾರೆ. 
 
ಜೊತೆಗೆ , ಸಿಎಂ ಸಿದ್ದರಾಮಯ್ಯ ನಿಜಕ್ಕೂ ದೈವಭಕ್ತರು . ಅವರು ಒಮ್ಮೆ ಅಯೋಧ್ಯೆಗೆ ಹೋಗುತ್ತೇನೆ ಎಂದು ಹೇಳಿಕೆ ನೀಡಿದರೆ ಆಗ ಎಲ್ಲವೂ ಸರಿಹೋಗುತ್ತದೆ ಎಂದು ಈಶ್ವರಪ್ಪ ಹೇಳಿದ್ದು, ಪ್ರತಿಬಾರಿಯೂ ಸಿದ್ದರಾಮಯ್ಯ ಮಾತು ಬದಲಿಸುವುದು ಸರಿಯಲ್ಲ ಎಂದರು.

ಸಂಸದ ಅನಂತ್‌ ಕುಮಾರ್‌ ಹೆಗಡೆ ಅವರು ಸಿಎಂ ಸಿದ್ದರಾಮಯ್ಯ ವಿರುದ್ದ ನೀಡಿರುವ ಹೇಳಿಕೆಯನ್ನು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಖಂಡಿಸಿದ್ದಾರೆ. ಈ ರೀತಿ ಪ್ರತಿಯೊಬ್ಬರೂ ಮಾತನಾಡುತ್ತಾ ಹೋದರೇ ಜಗತ್ತೇ ಹುಚ್ಚರ ಸಂತೆಯಾಗುತ್ತದೆ. ಹುಚ್ಚಾಸ್ಪತ್ರೆಗಳಲ್ಲಿ ಸ್ಥಳ ಸಾಕಾಗುವುದಿಲ್ಲ ಎಂದು ಹೇಳಿದ್ದಾರೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ಗಾಯಕಿಯ ಹಾಡು ಹಂಚಿಕೊಂಡ ಪ್ರಧಾನಿ ಮೋದಿ!