Select Your Language

Notifications

webdunia
webdunia
webdunia
webdunia

ಶ್ರೀರಾಮನ ಸುಂದರ ಚಿತ್ರ ಬರೆದ ಕ್ರಿಕೆಟಿಗ ಕುಲದೀಪ್ ಯಾದವ್

Kuldeep Yadav

Krishnaveni K

ಮುಂಬೈ , ಮಂಗಳವಾರ, 16 ಜನವರಿ 2024 (11:11 IST)
ಮುಂಬೈ: ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರ ಲೋಕಾರ್ಪಣೆಗೆ ಕ್ಷಣಗಣನೆ ಶುರುವಾಗಿದೆ. ಎಲ್ಲರೂ ಅವರದ್ದೇ ರೀತಿಯಲ್ಲಿ ಈ ಸುಂದರ ಕ್ಷಣಕ್ಕೆ ಕಾಣಿಕೆ ನೀಡುತ್ತಿದ್ದಾರೆ.

ಇದೀಗ ಕ್ರಿಕೆಟಿಗ ಕುಲದೀಪ್ ಯಾದವ್ ಶ್ರೀರಾಮ ಮತ್ತು ಅವನ ಬಂಟ ಆಂಜನೇಯನ ಸುಂದರ ಚಿತ್ರ ಬರೆದಿದ್ದು, ಈ ಫೋಟೋಗಳು ಆನ್ ಲೈನ್ ನಲ್ಲಿ ವೈರಲ್ ಆಗಿದೆ.

ಕುಲದೀಪ್ ಯಾದವ್ ಕೇವಲ ಕ್ರಿಕೆಟಿಗ ಮಾತ್ರವಲ್ಲ, ಅವರು ಒಬ್ಬ ಚಿತ್ರಕಲಾವಿದ ಕೂಡಾ. ಇದೀಗ ಸ್ವತಃ ತಮ್ಮ ಕೈಯಾರೆ ಶ್ರೀರಾಮ ಮತ್ತು ಹನುಮನ ಚಿತ್ರಗಳನ್ನು ರಚಿಸಿದ್ದಾರೆ. ಕುಲದೀಪ್ ಯಾದವ್ ಬಿಡಿಸಿರುವ ಈ ಚಿತ್ರವನ್ನು ನೆಟ್ಟಿಗರು ಬಹಳ ಕೊಂಡಾಡಿದ್ದಾರೆ.

ಅಯೋಧ್ಯೆಯಲ್ಲಿ ಜನವರಿ 22 ರಂದು ಶ್ರೀರಾಮನ ಭವ್ಯ ಮಂದಿರ ಲೋಕಾರ್ಪಣೆಯಾಗುತ್ತಿದೆ. ಇದರ ಬೆನ್ನಲ್ಲೇ ಕುಲದೀಪ್ ಯಾದವ್ ರಾಮನ ಚಿತ್ರ ಬಿಡಿಸಿ ಮಂದಿರ ಉದ್ಘಾಟನೆಗೆ ತಮ್ಮ ಶುಭಾಶಯ ಕೋರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗಳು ಸಾರಾ ಬಗ್ಗೆ ಸಚಿನ್ ತೆಂಡುಲ್ಕರ್ ಹೀಗೆಲ್ಲಾ ಹೇಳಿದ್ದು ನಿಜಾನಾ?