Select Your Language

Notifications

webdunia
webdunia
webdunia
webdunia

ಶಸ್ತ್ರಚಿಕಿತ್ಸೆ ಮಾಡಿ ಬೆರಳಚ್ಚು ಬದಲಾಯಿಸಿದ ಕಳ್ಳರು ಅಂದರ್

ಶಸ್ತ್ರಚಿಕಿತ್ಸೆ ಮಾಡಿ ಬೆರಳಚ್ಚು ಬದಲಾಯಿಸಿದ ಕಳ್ಳರು ಅಂದರ್
ಬೆಂಗಳೂರು , ಶನಿವಾರ, 3 ಸೆಪ್ಟಂಬರ್ 2022 (15:37 IST)
ಮಲ್ಕಾಜಿಗಿರಿ ವಲಯದ ವಿಶೇಷ ಕಾರ್ಯಾಚರಣೆ ತಂಡ ಘಟಕೇಸರ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಗಜ್ಜಲಕೊಂಡುಗರಿ ನಾಗ ಮುನೇಶ್ವರ ರೆಡ್ಡಿ, ಸಾಗಬಾಳ ವೆಂಕಟ್ ರಮಣ, ಬೋವಿಲ್ಲ ಶಿವಶಂಕರ ರೆಡ್ಡಿ ಮತ್ತು ರೆಂಡ್ಲ ರಾಮಕೃಷ್ಣಾ ರೆಡ್ಡಿ ಎಂಬ ನಾಲ್ವರನ್ನು ಬಂಧಿಸಿದ್ದಾರೆ.
 
ಈ ಆರೋಪಿಗಳು ಕಡಪಾದಿಂದ ಬಂದಿದ್ದು ಹೈದರಾಬಾದ್‌ನ ಹೋಟೆಲ್‌ನಲ್ಲಿ ತಂಗಿದ್ದರು. ಘಟಕೇಸರ್‌ನಲ್ಲಿ ಹೆಚ್ಚಿನ ಜನರಿಗೆ ಇಂತಹ ಶಸ್ತ್ರಚಿಕಿತ್ಸೆಗಳನ್ನು ಮಾಡಲು ಸಿದ್ಧರಾಗಿದ್ದರು ಎನ್ನಲಾಗಿದೆ
ಮುನೇಶ್ವರ ರೆಡ್ಡಿ ಈ ಹಿಂದೆ ಕುವೈತ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಭೇಟಿಯಾಗಿದ್ದು, ವೀಸಾ ಅವಧಿ ಮುಗಿಯುತ್ತಿದ್ದಂತೆ ಆತನನ್ನು ಭಾರತಕ್ಕೆ ಗಡೀಪಾರು ಮಾಡಿರುವ ಸುದ್ದಿಯನ್ನು ತಿಳಿದುಕೊಂಡಿರುತ್ತಾರೆ.
 
ಇದೇ ವ್ಯಕ್ತಿ ಶ್ರೀಲಂಕಾಕ್ಕೆ ತೆರಳಿ ಬೆರಳ ತುದಿಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ನಂತರ ಕುವೈತ್‌ಗೆ ಮರಳಿರುತ್ತಾರೆ. ತಾವು ಕೂಡ ಇಂತಹುದ್ದೇ ಯೋಜನೆಯನ್ನು ಮಾಡಬಹುದು ಎಂಬುದನ್ನು ಅರಿತುಕೊಂಡ ಮುನೇಶ್ವರ್ ಸಹಪಾಠಿಯೊಂದಿಗೆ ಯೋಜನೆಯನ್ನು ರೂಪಿಸುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಖ್ಯಾತ ಉದ್ಯಮಿ ಬಿ.ಆರ್.ಶೆಟ್ಟಿಗೆ ಮೋದಿ ಕಾರ್ಯಕ್ರಮಕ್ಕೆ ಬಿಡದ ಪೊಲೀಸರು ...!!