Select Your Language

Notifications

webdunia
webdunia
webdunia
webdunia

ಮನೆ ಬಿಟ್ಟು ಹೋಗಿ ತಿಂಗಳಾದ ಮೇಲೆ ಶವವಾಗಿ ಪತ್ತೆ; ಕಾರಣ?

ಮನೆ ಬಿಟ್ಟು ಹೋಗಿ ತಿಂಗಳಾದ ಮೇಲೆ ಶವವಾಗಿ ಪತ್ತೆ; ಕಾರಣ?
ದೇವನಹಳ್ಳಿ , ಬುಧವಾರ, 22 ಮೇ 2019 (13:59 IST)
ಕಳೆದೊಂದು ತಿಂಗಳ ಹಿಂದೆ ಮನೆ ಬಿಟ್ಟು ಹೋದ ವ್ಯಕ್ತಿಯೊಬ್ಬ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.

ದೇವನಹಳ್ಳಿ ತಾಲೂಕಿನ ಕುರುಬರಕುಂಟೆ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ದೊಡ್ಡತತ್ತಮಂಗಲ ಗ್ರಾಮದ ವೆಂಕಟೇಶ್ (45) ಮೃತಪಟ್ಟಿರುವ ದುರ್ದೈವಿ.

ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನಲ್ಲಿ ಈ ಘಟನೆ ನಡೆದಿದೆ.

ಅಂದಹಾಗೆ ಏಪ್ರಿಲ್ 22 ರಂದು ವೆಂಕಟೇಶ್ ಕುಡಿಯೋ ವಿಚಾರಕ್ಕೆ ಮನೆಯಲ್ಲಿ ಗಲಾಟೆ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದನು.

ಈ ಸಂಬಂಧ ಕುಟುಂಬಸ್ಥರು ವಿಜಯಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಒಂದು ತಿಂಗಳ ನಂತರ ವೆಂಕಟೇಶ್ ಶವವಾಗಿ ಪತ್ತೆಯಾಗಿದ್ದು, ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮೈತ್ರಿ ಸರಕಾರದ ಬಗ್ಗೆ ವಿಶ್ವನಾಥ್ ಸಿಡಿಸಿದ್ರು ಹೊಸ ಬಾಂಬ್