Select Your Language

Notifications

webdunia
webdunia
webdunia
Saturday, 12 April 2025
webdunia

ಮೈತ್ರಿ ಸರಕಾರದ ಬಗ್ಗೆ ವಿಶ್ವನಾಥ್ ಸಿಡಿಸಿದ್ರು ಹೊಸ ಬಾಂಬ್

ವಿಶ್ವನಾಥ
ಕೋಲಾರ , ಬುಧವಾರ, 22 ಮೇ 2019 (13:57 IST)
ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭಗೊಂಡಿರುವಂತೆ ಇತ್ತ ಸಿದ್ದರಾಮಯ್ಯರ ಜತೆ ಮುನಿಸಿಕೊಂಡಿರುವ ಹೆಚ್.ವಿಶ್ವನಾಥ್ ಹೊಸ ಬಾಂಬ್ ಸಿಡಿಸಿದ್ದಾರೆ.

ಕೋಲಾರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ ಹೇಳಿಕೆ ನೀಡಿದ್ದಾರೆ. ಹಳ್ಳಿ ಹಕ್ಕಿ ಹಾಡಲು, ಹಾರಾಡಲು ಸ್ವಾತಂತ್ರವಿದೆ ಎಂದಿದ್ದಾರೆ.

ರಾಜ್ಯದ ಮೈತ್ರಿ ಸರ್ಕಾರದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ನನಗೆ ಸಂಪೂರ್ಣ ಸ್ವಾತಂತ್ರವಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬದವರಿಂದಲೂ ನನಗೆ ಸ್ವಾತಂತ್ರವಿದೆ ಎಂದು ಹೇಳಿಕೊಂಡಿದ್ದಾರೆ.

ಹೆಚ್.ಡಿ.ದೇವೆಗೌಡರ ಕುಟುಂಬದಲ್ಲಿ ನಾನೂ ಒಬ್ಬನಾಗಿದ್ದೇನೆ ಅಂತಾನೂ ಹೆಚ್.ವಿಶ್ವನಾಥ್ ಹೇಳಿದ್ದಾರೆ. ಆ ಮೂಲಕ ಕೈ ಪಡೆಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಆ ದಂಪತಿ ಸಾವಿನ ಕಾರಣ ಕೇಳಿದ್ರೆ ಕಣ್ಣೀರು ಹಾಕುತ್ತೀರಿ