Select Your Language

Notifications

webdunia
webdunia
webdunia
webdunia

ಕುಟುಂಬ ರಾಜಕಾರಣ ಜನ ತೀರ್ಮಾನ ಮಾಡ್ತಾರೆ ಎಂದ ನಟ

ಕುಟುಂಬ ರಾಜಕಾರಣ ಜನ ತೀರ್ಮಾನ ಮಾಡ್ತಾರೆ ಎಂದ ನಟ
ಬೆಂಗಳೂರು , ಭಾನುವಾರ, 17 ಮಾರ್ಚ್ 2019 (19:12 IST)
ನಿಖಿಲ್ ರಾಜಕೀಯಕ್ಕೆ ಇನ್ನು ಸ್ವಲ್ಪ ವಿಳಂಬವಾಗಿ ಎಂಟ್ರಿ ಕೊಡಬೇಕಾಗಿತ್ತು. ನಿಖಿಲ್ ರಾಜಕೀಯಕ್ಕೆ ಬರುವ ವಯಸ್ಸಲ್ಲ ಇದು. ಹೀಗಂತ ಹಿರಿಯ ಚಿತ್ರನಟರೊಬ್ಬರು ಹೇಳಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಹಿರಿಯ ಚಿತ್ರನಟ ಹೇಳಿಕೆ ನೀಡಿದ್ದು, ನಿಖಿಲ್ ಯುವಕರು, ಇನ್ನಷ್ಟು ಅನುಭವದ ಅಗತ್ಯ ಇದೆ. ಈಗಷ್ಟೇ ಸಿನಿಮಾ ರಂಗಕ್ಕೆ ಬಂದಿದ್ದಾರೆ. ಇದನ್ನು ನಿಖಿಲ್ ಗೆ ಪ್ರೀತಿಯಿಂದಲೇ ಹೇಳ್ತಿದೀನಿ ನಾನು ಎಂದ್ರು.

ಬೆಂಗಳೂರು ಸೆಂಟ್ರಲ್ ಪಕ್ಷೇತರ ಅಭ್ಯರ್ಥಿ ನಟ ಪ್ರಕಾಶ್ ರೈ ಹೇಳಿಕೆ ನೀಡಿದ್ದು, ಮಂಡ್ಯದ ಪ್ರಜೆಗಳು ಭಾರತ ಪ್ರಜೆಗಳಾಗಿ ಯೋಚನೆ ಮಾಡಬೇಕು. ಸುಮಲತಾ ಸರಿಯಾದ ರೀತಿಯಲ್ಲಿ ಮಾತನಾಡ್ತಾ ಇದ್ದಾರೆ. ಅನುಭವಸ್ಥರ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಅವರಿಗೆ ರಾಜಕೀಯ ಗೊತ್ತಿಲ್ಲ ಅಂತ ಹೇಳಕ್ಕಾಗಲ್ಲ. ಒಳ್ಳೆಯ ರಾಜಕೀಯ ಬೇಕು ಅಂತ ಹೇಳ್ತಾ ಇದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಸ್ಪರ್ಧೆ ನಡೆಸುವ ಹಕ್ಕು ಅವರಿಗಿದೆ. ಸುಮಲತಾ ಅವ್ರು ಅಂಬರೀಶ್ ಜೊತೆ ಇದ್ದವರು, ಮಂಡ್ಯದ ಸೊಸೆ. ನನಗೆ ಹಲವು ವರ್ಷಗಳಿಂದ ಪರಿಚಯ ಇದಾರೆ. ಅವರಿಗೆ ಬೆಂಬಲವಾಗಿ ನಾನು ಇದ್ದೀನಿ ಅಂತ ಹೇಳಿದ್ರು.

ಕುಟುಂಬ ರಾಜಕಾರಣ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಮಗನಿಗೆ ಅರ್ಹತೆ ಇದ್ದರೆ ಅದು ಕುಟುಂಬ ರಾಜಕೀಯ ಅಲ್ಲ. ಕುಟುಂಬ ಎಂಬ ಕಾರಣಕ್ಕೆ ರಾಜಕೀಯಕ್ಕೆ ಬಂದರೆ ಕುಟುಂಬ ರಾಜಕೀಯ ಆಗುತ್ತದೆ. ಅದನ್ನು ಜನರು ನಿರ್ಧಾರ ಮಾಡ್ತಾರೆ ಅಂತ ನಟ ಪ್ರಕಾಶ್ ರಾಜ್ ಹೇಳಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ನನಗೆ ಇಷ್ಟ ಇಲ್ಲ ಎಂದ ನಟ ಪ್ರಕಾಶ್ ರಾಜ್