Select Your Language

Notifications

webdunia
webdunia
webdunia
webdunia

ಬಿಳಿ ಕಲ್ಲು ಕ್ವಾರಿ ನೀರಿನಲ್ಲಿ ಬಿದ್ದ ವ್ಯಕ್ತಿ ಏನಾದ ಗೊತ್ತಾ?

ಬಿಳಿ ಕಲ್ಲು ಕ್ವಾರಿ ನೀರಿನಲ್ಲಿ ಬಿದ್ದ ವ್ಯಕ್ತಿ ಏನಾದ ಗೊತ್ತಾ?
ಚಾಮರಾಜನಗರ , ಗುರುವಾರ, 4 ಅಕ್ಟೋಬರ್ 2018 (14:42 IST)
ಬಿಳಿ ಕಲ್ಲು ಕ್ವಾರಿ ನೀರಿನಲ್ಲಿ ಬಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಹಿರಿಕಾಟಿಯಲ್ಲಿ ಘಟನೆ ನಡೆದಿದೆ. ಮಹದೇವಸ್ವಾಮಿ ಉರುಫ್ ಸೋಮಣ್ಣ (45) ಕ್ವಾರಿಯಲ್ಲಿನ  ನೀರಿನಲ್ಲಿ ಮುಳುಗಿ ದಾರುಣ ಸಾವನ್ನಪ್ಪಿದ ದುರ್ದೈವಿಯಾಗಿದ್ದಾನೆ.

ಮಹದೇವಸ್ವಾಮಿ ಮೈಸೂರು ಜಿಲ್ಲೆಯ ಚಿಕ್ಕಹಳ್ಳಿ ಗ್ರಾಮದ ನಿವಾಸಿಯಾಗಿದ್ದಾನೆ. ಲಾರಿ ಚಾಲಕನಾಗಿದ್ದ ಮಹದೇವಸ್ವಾಮಿ ಸಾವು ಅನುಮಾನಾಸ್ಪದವಾಗಿದೆ ಎಂದು ಆತನ ಕುಟುಂಬಸ್ಥರು ಆರೋಪಿಸಿದ್ದಾರೆ.

50 ಅಡಿ ಆಳದ ನೀರಿನಲ್ಲಿ ಮಹದೇವಸ್ವಾಮಿ ಮೃತ ದೇಹ ಪತ್ತೆಯಾಗಿದೆ.  ಮಳೆ ನೀರು ತುಂಬಿ ಸ್ಥಗಿತಗೊಂಡಿದ್ದ ಬಿಳಿ ಕಲ್ಲು ಕ್ವಾರಿಯಲ್ಲಿ ಶವ ಪತ್ತೆಯಾಗಿದೆ. ಈ ಕುರಿತು ಗುಂಡ್ಲುಪೇಟೆ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ನಾನ್ ಪೆನ್ಷನ್ ಸ್ಕೀಮ್ ವಿರುದ್ಧ ವಿಭಿನ್ನ ಹೋರಾಟನಾನ್ ಪೆನ್ಷನ್ ಸ್ಕೀಮ್ ವಿರುದ್ಧ ವಿಭಿನ್ನ ಹೋರಾಟ