ತುಮಕೂರು: ತ್ರಿವಿಧ ದಾಸೋಹಿ ದಿವಂಗತ ಶಿವಕುಮಾರ ಸ್ವಾಮೀಜಿಗಳ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಇಂದು ಡಿಸಿಎಂ ಡಿಕೆ ಶಿವಕುಮಾರ್ ಭಾಗಿಯಾಗಿದ್ದಾರೆ. ಈ ವೇಳೆ ಮಾತನಾಡಿದ ಡಿಕೆಶಿ ಶಿವಕುಮಾರ ಸ್ವಾಮೀಜಿಗಳ ಬಗ್ಗೆ ಮಾತನಾಡುತ್ತಾ ನನಗೂ ನನ್ನ ತಂದೆ ತಾಯಿ ನನ್ನ ಭಾಗ್ಯ ಎಂದರು. ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಅಬ್ಬಾ ಎಂಥಾ ಹೋಲಿಕೆ ಎಂದು ವ್ಯಂಗ್ಯ ಮಾಡಿದ್ದಾರೆ.
ಇಂದು ಸಿದ್ಧಗಂಗಾ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು ಶ್ರೀಗಳು ಹಾಕಿಕೊಟ್ಟ ದಾರಿ, ಅವರ ನುಡಿಮುತ್ತುಗಳು ನಮ್ಮ ಬದುಕಿಗೆ ದೊಡ್ಡ ಶಕ್ತಿ ಎಂದರು.
ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದೇ ನನ್ನ ಭಾಗ್ಯ. ನನ್ನತಂದೆ ತಾಯಿಯವರು ನನಗೆ ಶಿವಕುಮಾರ ಎಂದು ಹೆಸರಿಟ್ಟಿದ್ದು ನನ್ನ ಭಾಗ್ಯ. ಇಂದು ನಾವು ಒಬ್ಬ ದೇವನ ಸ್ವರೂಪಿಯನ್ನು ಸ್ಮರಿಸುವ ಭಾಗ್ಯ ದೊರೆತಿದೆ ಎಂದಿದ್ದಾರೆ.
ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಎಂಥಾ ಹೋಲಿಕೆ. ನಂದೇನಿಲ್ಲ ಎನ್ನುವ ಸ್ವಾಮೀಜಿಗಳು ಎಲ್ಲಿ ಎಲ್ಲವೂ ನಂದೇ ಎನ್ನುವ ಡಿಕೆಶಿ ಎಲ್ಲಿ ಎಂದು ಕೆಲವರು ವ್ಯಂಗ್ಯ ಮಾಡಿದ್ದಾರೆ. ಶಿವ ಎಂಬ ಹೆಸರಿಟ್ಟ ಮಾತ್ರಕ್ಕೆ ಎಲ್ಲರೂ ದೇವರಾಗಲ್ಲ. ಹೆಸರು ಇಟ್ಟುಕೊಂಡ ತಕ್ಷಣ ಎಲ್ಲರೂ ಶಿವಕುಮಾರಸ್ವಾಮೀಜಿ ಆಗಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.