Select Your Language

Notifications

webdunia
webdunia
webdunia
webdunia

ಡಿಕೆ ಶಿವಕುಮಾರ್ ಮೇಲಿಗೆ ಆ ಎರಡು ತೂಗುಗತ್ತಿ: ಯಾವುದು ನೋಡಿ

DK Shivakumar
ಬೆಂಗಳೂರು: ಸಿಎಂ ಆಗಿ ಹೊಸ ಭರವಸೆ ಮೂಡಿಸಿರುವ ಡಿಕೆ ಶಿವಕುಮಾರ್ ಮೇಲೆ ಎರಡು ತೂಗುಗತ್ತಿಗಳಿವೆ. ಕನಕಪುರ ಬಂಡೆ ಮೇಲಿರುವ ಎರಡು ಆತಂಕಗಳು ಏನು ನೋಡಿ.

2023 ರ ಚುನಾವಣಾ ಅಫಿಡವಿಟ್ ಪ್ರಕಾರ ಡಿಕೆ ಶಿವಕುಮಾರ್ ವಿರುದ್ಧ 19 ಕ್ರಿಮಿನಲ್ ಕೇಸ್ ಗಳಿವೆ. ಆ ಪೈಕಿ ಎರಡು ಕೇಸ್ ಗಳು ಅವರನ್ನು ತೂಗುಗತ್ತಿಯಂತೆ ಸದಾ ಕಾಡುತ್ತಿವೆ. ಅವುಗಳ ಕಾನೂನು ಹೋರಾಟದಲ್ಲಿ ಇನ್ನೂ ಅಂತಿಮ ತೀರ್ಪು ಬಂದಿಲ್ಲ. ಆ ಎರಡು ಪ್ರಕರಣಗಳು ಯಾವುವು ನೋಡೋಣ.

ಇಡಿ (Enforcement Directorate) ಮನಿ ಲಾಂಡರಿಂಗ್ ಪ್ರಕರಣ – ರದ್ದುಹಿನ್ನೆಲೆ:
2017 ರ ಆದಾಯ ತೆರಿಗೆ ದಾಳಿಯ ವೇಳೆ ದೆಹಲಿಯ ಅವರ ನಿವಾಸಗಳಲ್ಲಿ ₹8.59 ಕೋಟಿ ನಗದು ಪತ್ತೆಯಾದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ED) ಮನಿ ಲಾಂಡರಿಂಗ್ ಕಾಯ್ದೆಯಡಿ (PMLA) ಈ ಪ್ರಕರಣ ದಾಖಲಿಸಿತ್ತು. ಈ ಸಂಬಂಧ ಅವರು ೨೦೧೯ ರಲ್ಲಿ ಸುಮಾರು 50 ದಿನಗಳ ಕಾಲ ತಿಹಾರ್ ಜೈಲಿನಲ್ಲಿದ್ದರು. 

ಪ್ರಸ್ತುತ ಸ್ಥಿತಿ: ಮಾರ್ಚ್ 5, 2024 ರಂದು ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಸಂಪೂರ್ಣವಾಗಿ ಖುಲಾಸೆಗೊಳಿಸಿದೆ (Quashed). ಆದಾಯ ತೆರಿಗೆ ವಂಚನೆಯು ಪಿಎಂಎಲ್‌ಎ ಅಡಿಯಲ್ಲಿ ನಿಗದಿಪಡಿಸಿದ ಅಪರಾಧದ ವ್ಯಾಪ್ತಿಗೆ ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಸಿಬಿಐ (CBI) ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣ – ಕಾನೂನು ಹೋರಾಟ ಬಾಕಿ
ಹಿನ್ನೆಲೆ: ₹74.93 ಕೋಟಿ ರೂಪಾಯಿಗಳಷ್ಟು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಿ ಸಿಬಿಐ ಈ ಪ್ರಕರಣ ದಾಖಲಿಸಿತ್ತು. 

ಪ್ರಸ್ತುತ ಸ್ಥಿತಿ: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಹಿಂದಿನ ಬಿಜೆಪಿ ಸರ್ಕಾರ ಸಿಬಿಐ ತನಿಖೆಗೆ ನೀಡಿದ್ದ ಒಪ್ಪಿಗೆಯನ್ನು (Consent) ಹಿಂತೆಗೆದುಕೊಂಡು ಪ್ರಕರಣವನ್ನು ಲೋಕಾಯುಕ್ತಕ್ಕೆ ವಹಿಸಿತು. ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ. ಸಿಬಿಐ ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಪ್ರಕರಣ ಸದ್ಯ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ.

ಉಳಿದವು ಅಂತಹದ್ದೇನೂ ಗಂಭೀರ ಪ್ರಕರಣಗಳಲ್ಲ. ಆದರೆ ಈ ಎರಡು ಪ್ರಕರಣಗಳು ಡಿಕೆಶಿಯನ್ನು ಬಹಳ ಕಾಡಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗನಿಗೆ ಮೊಬೈಲ್ ನೋಡಬೇಡ ಎಂದಿದ್ದೆ ತಪ್ಪಾಯ್ತು, ತಂದೆ, ಅಕ್ಕನ ಹತ್ಯೆ, ತಾಯಿ ಗಂಭೀರ