Publish Date: Sat, 06 Jun 2026 (10:33 IST)
Updated Date: Sat, 06 Jun 2026 (10:36 IST)
ಬೆಂಗಳೂರು: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಂಡಾಯವೆದ್ದಿದ್ದ ಹಿರಿಯ ಶಾಸಕ ರಾಮಲಿಂಗಾ ರೆಡ್ಡಿಗೆ ಮಾಧ್ಯಮಗಳು ರಾಜೀನಾಮೆ ವಾಪಸ್ ಮಾಡ್ತೀರಾ ಎಂದು ಕೇಳಿದ್ದಕ್ಕೆ ಶಾಕಿಂಗ್ ರಿಯಾಕ್ಷನ್ ಕೊಟ್ಟಿದ್ದಾರೆ.
ಇಂದು ಮಾಧ್ಯಮಗಳು ರಾಮಲಿಂಗಾ ರೆಡ್ಡಿಯವರಿಗೆ ತಮ್ಮ ರಾಜೀನಾಮೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ನಿನ್ನೆ ತಡರಾತ್ರಿ ಸ್ವತಃ ಸಿಎಂ ಡಿಕೆ ಶಿವಕುಮಾರ್ ಬಂದು ರಾಮಲಿಂಗಾ ರೆಡ್ಡಿ ಮನವೊಲಿಕೆ ಮಾಡಲು ಪ್ರಯತ್ನ ಮಾಡಿದ್ದರು. ಇದಾದ ಬಳಿಕ ರಾಮಲಿಂಗಾ ರೆಡ್ಡಿ ಕೊಂಚ ಮೆತ್ತಗಾಗಿದ್ದರು.
ಆದರೆ ರಾಜೀನಾಮೆ ವಾಪಸ್ ಪಡೆಯುವುದಾಗಿ ಅಧಿಕೃತವಾಗಿ ಹೇಳಿಲ್ಲ. ಈ ಬಗ್ಗೆ ಇಂದು ಮಾಧ್ಯಮಗಳು ಪ್ರಶ್ನೆ ಮಾಡಿವೆ. ನಾನು, ಮುಖ್ಯಮಂತ್ರಿಗಳು ನಿನ್ನೆ ಚರ್ಚೆ ಮಾಡಿದ್ದೀವಿ. ನೋಡೋಣ ಏನಾಗುತ್ತದೆ ಎಂದು. ನಾವು ಮೂರು ಗಂಟೆ ಎಲ್ಲಾ ಚರ್ಚೆ ಮಾಡಿಲ್ಲ .11 ಗಂಟೆಗೆ ಬಂದಿದ್ರು ನಂತರ ಊಟ ಮಾಡಿಕೊಂಡು ಹೋದರು ಅಷ್ಟೇ. ನಾನು ರಣದೀಪ್ ಸುರ್ಜೇವಾಲ ಅಥವಾ ಬೇರೆ ಯಾರನ್ನೂ ಭೇಟಿ ಮಾಡುವ ಪ್ರಯತ್ನ ಮಾಡಲಿಲ್ಲ. ಈಗ ಏನನ್ನೂ ಹೇಳಲ್ಲ ಎಂದಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ