Select Your Language

Notifications

webdunia
webdunia
webdunia
webdunia

ರಾಜೀನಾಮೆ ವಾಪಸ್ ಕೊಡ್ತೀರಾ ಎಂದಿದ್ದಕ್ಕೆ ರಾಮಲಿಂಗಾ ರೆಡ್ಡಿ ಶಾಕಿಂಗ್ ರಿಯಾಕ್ಷನ್

Ramalinga Reddy
ಬೆಂಗಳೂರು: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಂಡಾಯವೆದ್ದಿದ್ದ ಹಿರಿಯ ಶಾಸಕ ರಾಮಲಿಂಗಾ ರೆಡ್ಡಿಗೆ ಮಾಧ್ಯಮಗಳು ರಾಜೀನಾಮೆ ವಾಪಸ್ ಮಾಡ್ತೀರಾ ಎಂದು ಕೇಳಿದ್ದಕ್ಕೆ ಶಾಕಿಂಗ್ ರಿಯಾಕ್ಷನ್ ಕೊಟ್ಟಿದ್ದಾರೆ.

ಇಂದು ಮಾಧ್ಯಮಗಳು ರಾಮಲಿಂಗಾ ರೆಡ್ಡಿಯವರಿಗೆ ತಮ್ಮ ರಾಜೀನಾಮೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ನಿನ್ನೆ ತಡರಾತ್ರಿ ಸ್ವತಃ ಸಿಎಂ ಡಿಕೆ ಶಿವಕುಮಾರ್ ಬಂದು ರಾಮಲಿಂಗಾ ರೆಡ್ಡಿ ಮನವೊಲಿಕೆ ಮಾಡಲು ಪ್ರಯತ್ನ ಮಾಡಿದ್ದರು. ಇದಾದ ಬಳಿಕ ರಾಮಲಿಂಗಾ ರೆಡ್ಡಿ ಕೊಂಚ ಮೆತ್ತಗಾಗಿದ್ದರು.

ಆದರೆ ರಾಜೀನಾಮೆ ವಾಪಸ್ ಪಡೆಯುವುದಾಗಿ ಅಧಿಕೃತವಾಗಿ ಹೇಳಿಲ್ಲ. ಈ ಬಗ್ಗೆ ಇಂದು ಮಾಧ್ಯಮಗಳು ಪ್ರಶ್ನೆ ಮಾಡಿವೆ. ‘ನಾನು, ಮುಖ್ಯಮಂತ್ರಿಗಳು ನಿನ್ನೆ ಚರ್ಚೆ ಮಾಡಿದ್ದೀವಿ. ನೋಡೋಣ ಏನಾಗುತ್ತದೆ ಎಂದು. ನಾವು ಮೂರು ಗಂಟೆ ಎಲ್ಲಾ ಚರ್ಚೆ ಮಾಡಿಲ್ಲ .11 ಗಂಟೆಗೆ ಬಂದಿದ್ರು ನಂತರ ಊಟ ಮಾಡಿಕೊಂಡು ಹೋದರು ಅಷ್ಟೇ. ನಾನು ರಣದೀಪ್ ಸುರ್ಜೇವಾಲ ಅಥವಾ ಬೇರೆ ಯಾರನ್ನೂ ಭೇಟಿ ಮಾಡುವ ಪ್ರಯತ್ನ ಮಾಡಲಿಲ್ಲ. ಈಗ ಏನನ್ನೂ ಹೇಳಲ್ಲ’ ಎಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಚೈಲ್ಡ್ ಕೇರ್ ಸೆಂಟರ್ ನಲ್ಲಿ ಆಯಾ ಕ್ರೌರ್ಯ: ಪುಟಾಣಿಗೆ ಹೇಗೆಲ್ಲಾ ಚಿತ್ರಹಿಂಸೆ ನೀಡಿದ್ಳು Video ನೋಡಿ