Select Your Language

Notifications

webdunia
webdunia
webdunia
webdunia

ಧರ್ಮಸಿಂಗ್ ಪುತ್ರ ವಿಜಯಸಿಂಗ್ ರಿಂದ ಜೀವ ಬೆದರಿಕೆ: ದೂರು ದಾಖಲಿಸಿದ ಕಾಂಗ್ರೆಸ್ ಅಭ್ಯರ್ಥಿ

ಧರ್ಮಸಿಂಗ್ ಪುತ್ರ ವಿಜಯಸಿಂಗ್ ರಿಂದ ಜೀವ ಬೆದರಿಕೆ: ದೂರು ದಾಖಲಿಸಿದ ಕಾಂಗ್ರೆಸ್ ಅಭ್ಯರ್ಥಿ
ಬೀದರ್ , ಶನಿವಾರ, 18 ಮೇ 2019 (15:41 IST)
ಮಾಜಿ ಮುಖ್ಯಮಂತ್ರಿ  ಧರಂಸಿಂಗ್ ಅವರ  ಪುತ್ರ ವಿಧಾನಪರಿಷತ್ ಸದಸ್ಯ ವಿಜಯಸಿಂಗ್ ಹಾಗೂ ಅವರ ಬೆಂಬಲಿಗರು ಹಲ್ಲೆ ಯತ್ನ , ಜೀವ ಬೇದರಿಕೆ ಇದೆಯಂದು ದೂರು ದಾಖಲಾಗಿದೆ.

ತಮಗೆ ರಕ್ಷಣೆ ನೀಡುವಂತೆ ಔರಾದ್ ಮೀಸಲು ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ವಿಜಯಕುಮಾರ್ ಕವಡ್ಯಾಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಸ್ಥಳೀಯ ಸಂಸ್ಥೆ ಚುನಾವಣೆ ಟಿಕೇಟ್ ಹಂಚಿಕೆ ವಿಚಾರದಲ್ಲಿ ವಿಧಾನಪರಿಷತ್ ಸದಸ್ಯ ವಿಜಯಸಿಂಗ್ ಹಾಗೂ ಬೆಂಬಲಿಗರು ವಿಶೇಷಚೇತನರಾಗಿರುವ ತಮ್ಮ ಹಲ್ಲೆ ಯತ್ನ ನಡೆಸಿದ್ದಾರೆ. ಔರಾದ್ ಪಟ್ಟಣ ಪಂಚಾಯತಿ ಬಿ ಫಾರ್ಮ ಹಂಚಿಕೆ ವಿಚಾರದಲ್ಲಿ  'ಬಾಯಿ ಮುಚ್ಚಕೊಂಡು ಸುಮ್ಮನಿರಬೇಕು. ಇಲ್ಲದಿದ್ದರೆ ಲಾಡ್ಜ್  ಮೇಲಿನಿಂದ ಎಸೆದು ಮುಗಿಸಿ ಬಿಡುತ್ತೇವೆ " ಎಂದು ವಿಜಯಸಿಂಗ್ ಅವರು ತಮಗೆ ಅವಾಜ್ ಹಾಕಿದ್ದಾರೆ.

ಪರಿಶಿಷ್ಟ ಜಾತಿಗೆ ಸೇರಿದ ಹಾಗೂ ವಿಶೇಷ ಚೇತನ ರಾಗಿರುವ ನನ್ನನ್ನು ಕ್ಷೇತ್ರದಲ್ಲಿ ಮುಗಿಸಿ ಬಿಡಲು ಬೆಂಬಲಿಗರನ್ನು ಎತ್ತಿ ಕಟ್ಟಿದ್ದಾರೆ ನನಗೆ ಜೀವ ಭಯ ಇದೆ. ಹೀಗಾಗಿ ತಮಗೆ ರಕ್ಷಣೆ ನೀಡುವಂತೆ  ವಿಜಯ ಕುಮಾರ ಕವಡ್ಯಾಳ  ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.

ಪಟ್ಟಣ ಪಂಚಾಯತ ಚುನಾವಣೆಯಲ್ಲಿ ವಿಜಯಸಿಂಗ್ ಬೆಂಬಲಿಗರಿಗೆ ಟಿಕೆಟ್ ನೀಡುವಂತೆ  ಮೇ 15 ರ ಮಧ್ಯರಾತ್ರಿ 1.30  ರ ಸುಮಾರಿಗೆ  ತಮ್ಮ  ಮೇಲೆ ಮತ್ತೊಮ್ಮೆ ಹಲ್ಲೆ ಯತ್ನ ನಡೆದಿದ್ದು, ಹೀಗೆ ಪದೆ ಪದೆ ಹಲ್ಲೆ ಯತ್ನ ಹಾಗೂ ರಾಜಕೀಯ ಹಗೆತನ ಸಾಧಿಸುತ್ತಿರುವ ವಿಜಯಸಿಂಗ್ ಅವರ ಹುನ್ನಾರದ ರಾಜಕೀಯದಿಂದ ಮಾನಸಿಕವಾಗಿ ನೊಂದಿರುವ ತಾವು  ಎಸ್.ಪಿ ಕಚೇರಿಗೆ ಬಂದು ದೂರು ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

87 ನೇ ವಸಂತಕ್ಕೆ ಕಾಲಿಟ್ಟ ರಾಜಕೀಯ ದಿಗ್ಗಜ ದೇವೇಗೌಡರು