Select Your Language

Notifications

webdunia
webdunia
webdunia
webdunia

87 ನೇ ವಸಂತಕ್ಕೆ ಕಾಲಿಟ್ಟ ರಾಜಕೀಯ ದಿಗ್ಗಜ ದೇವೇಗೌಡರು

87 ನೇ ವಸಂತಕ್ಕೆ ಕಾಲಿಟ್ಟ ರಾಜಕೀಯ ದಿಗ್ಗಜ ದೇವೇಗೌಡರು
ಬೆಂಗಳೂರು , ಶನಿವಾರ, 18 ಮೇ 2019 (15:35 IST)
87ನೇ ಜನ್ಮದಿನದ ಅಂಗವಾಗಿ ಕುಟುಂಬ ಸದಸ್ಯರೊಂದಿಗೆ ತಿರುಪತಿಯಲ್ಲಿ ಬೆಳಿಗ್ಗೆ ಐದು ಗಂಟೆಗೆ ಸುಪ್ರಭಾತ ಸೇವೆ ಸಲ್ಲಿಸಿದ್ದಾರೆ ದೇವೇಗೌಡರು.

ಈ ಬಾರಿ ಪ್ರಧಾನಿ ಹುದ್ದೆ ಆಸೆ ಹೊತ್ತಿರುವ ಮಹಾನ್ ದೈವಭಕ್ತ ದೇವೇಗೌಡರು, ಶತಾಯಗತಾಯ ದೆಹಲಿ ಗದ್ದುಗೆ ಏರಬೇಕು ಎಂದು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಮೇ 23ರ ನಂತರ ದೆಹಲಿಯಲ್ಲಿ ಉನ್ನತ ಸ್ಥಾನ ಪಡೆಯಲು ದೇವೇಗೌಡ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಮೇ 21ಕ್ಕೆ ರಾಜ್ಯ ಜೆಡಿಎಸ್ ಪ್ರಮುಖರ ಸಭೆ ಕರೆದಿದ್ದಾರೆ ದೇವೇಗೌಡರು.

ಲೋಕಸಭಾ ಫಲಿತಾಂಶ ದಿನದಂದು ದೆಹಲಿಯಲ್ಲಿ ಸೋನಿಯಾ ಗಾಂಧಿ ಜೊತೆ ಚರ್ಚೆ ನಡೆಸಲಿದ್ದಾರೆ.

ಡಿಎಂಕೆ, ಎನ್ ಸಿ ಪಿ, ಜೆಡಿ ಎಸ್, ಆರ್ ಜೆ ಡಿ, ವೈ ಎಸ್ ಆರ್, ನವೀನ್ ಪಟ್ನಾಯಕ್ 
ಜೊತೆಗೆ ಸೋನಿಯಾ ಗಾಂಧಿ ಹಾಗೂ ದೇವೇಗೌಡರು ದೆಹಲಿಯಲ್ಲಿ ಸಭೆ ನಡೆಸಲಿದ್ದಾರೆ.
ಬಿಜೆಪಿಯೇತರ ಪಕ್ಷಗಳನ್ನು ಒಂದುಗೂಡಿಸಲು ಸೋನಿಯಾಗಾಂಧಿ- ದೇವೇಗೌಡರು ರಣತಂತ್ರ ರೂಪಿಸುತ್ತಿದ್ದಾರೆ.
ಲೋಕಸಭಾ ಫಲಿತಾಂಶಕ್ಕೆ ಮುನ್ನವೇ ಫೀಲ್ಡ್ ಗೆ ಇಳಿದಿದ್ದಾರೆ ಸೋನಿಯಾಗಾಂಧಿ- ದೇವೇಗೌಡರು.

ಯಾವುದೇ ಕಾರಣಕ್ಕೂ ಮತ್ತೊಂದು ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಬಾರದು ಎಂದು ಸೋನಿಯಾಗಾಂಧಿ ದೇವೇಗೌಡ ಮತ್ತಿತರರು ಕಸರತ್ತು ನಡೆಸುತ್ತಿದ್ದಾರೆ.

ಏತನ್ಮಧ್ಯೆ, 87 ವರ್ಷಕ್ಕೆ ಕಾಲಿಡುತ್ತಿರುವ ರಾಜಕೀಯ ಭೀಷ್ಮನಿಗೆ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ. ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ ನಮೋ.



Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಮುಖಂಡೆ ಹತ್ಯೆ ಕೇಸ್; ತನಿಖೆ ಚುರುಕು