Select Your Language

Notifications

webdunia
webdunia
webdunia
webdunia

DGP Om Prakash Rao: ಡಿಜಿಪಿ ಓಂ ಪ್ರಕಾಶ್ ರಾವ್ ಹತ್ಯೆ ಶಾಕಿಂಗ್ ಸತ್ಯಗಳು ಬಹಿರಂಗ

DGP Om Prakash murder

Krishnaveni K

ಬೆಂಗಳೂರು , ಸೋಮವಾರ, 26 ಮೇ 2025 (09:45 IST)
ಬೆಂಗಳೂರು: ಮಾಜಿ ಡಿಜಿಪಿ ಓಂ ಪ್ರಕಾಶ್ ರಾವ್ ಹತ್ಯೆಯ ಶಾಕಿಂಗ್ ಹತ್ಯೆಗಳು ಈಗ ಪೊಲೀಸರ ತನಿಖೆಯಲ್ಲಿ ಬಹಿರಂಗಗೊಂಡಿದೆ. ಚಾರ್ಜ್ ಶೀಟ್ ನಲ್ಲಿ ಕೊಲೆ ಯಾಕೆ ಆಯಿತು ಎಂಬ ಬಗ್ಗೆ ಸಂಪೂರ್ಣ ವಿವರ ಲಭ್ಯವಾಗಿದೆ.

ಡಿಜಿಪಿ ಓಂ ಪ್ರಕಾಶ್ ಹತ್ಯೆ ಆರೋಪದಲ್ಲಿ ಅವರ ಪತ್ನಿ ಪಲ್ಲವಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದರು. ಇದೀಗ ಪಲ್ಲವಿ ತಪ್ಪೊಪ್ಪಿಕೊಂಡಿದ್ದು ತನ್ನ ಪತಿಯನ್ನು ಕೊಲೆ ಮಾಡುವುದಕ್ಕೆ ಕಾರಣವನ್ನೂ ತಿಳಿಸಿದ್ದಾರೆ. ಪಲ್ಲವಿ ತಪ್ಪೊಪ್ಪಿಗೆ ಬಳಿಕ ಪೊಲೀಸರು ಈಗ ಚಾರ್ಜ್ ಶೀಟ್ ರೆಡಿ ಮಾಡಿದ್ದು, ಇದರಲ್ಲಿರುವ ಅಂಶಗಳು ಶಾಕಿಂಗ್ ಆಗಿದೆ.

ಕೊಲೆಗೆ 9 ಕಾರಣಗಳು
-ಡಿಜಿಪಿ ಓಂ ಪ್ರಕಾಶ್ ತಮ್ಮ ಮನೆಯ ಬಗ್ಗೆ ಗಮನ ಹರಿಸಿಲ್ಲ ಎಂಬುದು ಪಲ್ಲವಿಯ ಆರೋಪವಾಗಿತ್ತು.
-ಮಗಳಿಗೆ ಮದುವೆ ಮಾಡಲು ಆಸಕ್ತಿಯನ್ನೂ ತೋರುತ್ತಿರಲಿಲ್ಲ.
-ಮನೆಯಲ್ಲಿ ವೈಮನಸ್ಯಗಳಾದಾಗ ಅದನ್ನು ಬಗೆಹರಿಸುವುದು ಬಿಟ್ಟು ಸೀದಾ ಸಹೋದರಿ ಮನೆಗೆ ಹೋಗಿ ಬಿಡುತ್ತಿದ್ದರು.
-ಮಗಳನ್ನೂ ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ, ಜೀವನ ನಿರ್ವಹಣೆಗೆ ಹಣವನ್ನೂ ಕೊಡ್ತಿರಲಿಲ್ಲ.
-ಇದರಿಂದಾಗಿ ಅಮ್ಮ-ಮಗಳು ಇಬ್ಬರೂ ಮಾನಸಿಕವಾಗಿ ಸಮಸ್ಯೆ ಎದುರಿಸುತ್ತಿದ್ದರು.
-ಹಣದ ವ್ಯವಹಾರವನ್ನೆಲ್ಲಾ ಓಂ ಪ್ರಕಾಶ್ ಅವರೇ ನೋಡಿಕೊಳ್ಳುತ್ತಿದ್ದರು.
-ಓಂ ಪ್ರಕಾಶ್ ತನ್ನನ್ನು ಒಂದಲ್ಲಾ ಒಂದು ದಿನ ಕೊಲೆ ಮಾಡಬಹುದು ಎಂದು ಪಲ್ಲವಿ ಭಯಪಟ್ಟಿದ್ದರು.
-ಹಲವು ಬಾರಿ ಪಲ್ಲವಿ ಮನೆ ಬಿಟ್ಟು ಹೋಗಿದ್ದರು.
-ತಾನು ಕೊಲೆಯಾಗುವ ಬದಲು ಪತಿಯನ್ನೇ ಕೊಲೆ ಮಾಡಲು ನಿರ್ಧರಿಸಿದ್ದರು.

ಕೊಲೆ ಮಾಡಿದ್ದು ಹೇಗೆ?
ಪತಿಯನ್ನು ಕೊಲೆ ಮಾಡಿ ಚಾಕುವಿನಿಂದ 8 ರಿಂದ 10 ಬಾರಿ ಇರಿದಿದ್ದಾಗಿ ಪಲ್ಲವಿ ಬಾಯ್ಬಿಟ್ಟಿದ್ದಾಳೆ. ಕೊಲೆ ನಡೆಯುವಾಗ ಮಗಳೂ ಸ್ಥಳದಲ್ಲಿದ್ದರು. ಆದರೆ ಆಕೆಯ ಪಾತ್ರ ತನಿಖೆಯಲ್ಲಿ ಕಂಡುಬಂದಿಲ್ಲ. ಹೀಗಾಗಿ ಆಕೆಯನ್ನು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ಮಳೆಗೆ ಶುರುವಾಯ್ತು ಮಂಗಳೂರು, ಬೆಂಗಳೂರು ಪ್ರಯಾಣಿಕರಿಗೆ ಸಂಕಷ್ಟ: ಶಿರಾಡಿ ಘಾಟಿ ಏನಾಗಿದೆ