Select Your Language

Notifications

webdunia
webdunia
webdunia
webdunia

ಸುಮಲತಾ ಸಭೆಯಲ್ಲಿ ಡಿ ಬಾಸ್ ದರ್ಶನ್ ಭಾಗಿ ಸಾಧ್ಯತೆ

Sumalatha Ambareesh

Krishnaveni K

ಮಂಡ್ಯ , ಸೋಮವಾರ, 1 ಏಪ್ರಿಲ್ 2024 (10:47 IST)
ಮಂಡ್ಯ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಬೇಕೋ, ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕೋ ಎಂಬ ಗೊಂದಲಗಳಿಗೆ ಹಾಲಿ ಸಂಸದೆ ಸುಮಲತಾ ಅಂಬರೀಶ್ ಏಪ್ರಿಲ್ 3 ರಂದು ತೆರೆ ಎಳೆಯುವ ಸಾಧ‍್ಯತೆಯಿದೆ.

ಈ ಸಭೆಯಲ್ಲಿ ಸುಮಲತಾ ಬೆಂಬಲಿಗ ನಾಯಕರು, ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಅವರ ಸಮ್ಮುಖದಲ್ಲಿ ತಮ್ಮ ಭವಿಷ್ಯದ ತೀರ್ಮಾನ ಮಾಡುವುದಾಗಿ ಸುಮಲತಾ ಈಗಾಗಲೇ ಹೇಳಿದ್ದಾರೆ. ತನ್ನ ರಾಜಕೀಯ ಭವಿಷ್ಯವೇನಿದ್ದರೂ ಮಂಡ್ಯದಿಂದಲೇ ಎಂದು ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಆದರೆ ಬಿಜೆಪಿಯಿಂದ ಅವರಿಗೆ ಮಂಡ್ಯ ಟಿಕೆಟ್ ಸಿಕ್ಕಿಲ್ಲ. ಬಿಜೆಪಿ ಮಂಡ್ಯ ಕ್ಷೇತ್ರವನ್ನು ಮೈತ್ರಿ ಪಕ್ಷ ಜೆಡಿಎಸ್ ಗೆ ಬಿಟ್ಟುಕೊಟ್ಟಿದೆ. ಹೀಗಾಗಿ ಮಂಡ್ಯದಿಂದ ಎಚ್ ಡಿ ಕುಮಾರಸ್ವಾಮಿ ಕಣಕ್ಕಿಳಿಯುತ್ತಿದ್ದಾರೆ. ಹೀಗಾಗಿ ಸುಮಲತಾ ತಮ್ಮ ಮುಂದಿನ ನಡೆ ನಿರ್ಧರಿಸಲಿದ್ದಾರೆ.

ಮಂಡ್ಯದಲ್ಲಿ ಏಪ್ರಿಲ್ 3 ರಂದು ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕ್ ಲೈನ್ ವೆಂಕಟೇಶ್ ಮುಂತಾದವರೂ ಭಾಗಿಯಾಗುವ ಸಾಧ‍್ಯತೆಯಿದೆ. ದರ್ಶನ್ ಈಹಿಂದೆ ಸುಮಲತಾ ಸಭೆ ನಡೆಸಿದಾಗಲೂ ಭಾಗಿಯಾಗಿದ್ದರು. ಇದಕ್ಕೆ ಮೊದಲು 2019 ರ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಗೆಲುವಿಗೆ ಪ್ರಚಾರ ಮಾಡಿ ಶ್ರಮಿಸಿದ್ದರು. ತಮ್ಮ ಇನ್ನೊಬ್ಬ ಮಗ ಎಂದೇ ದರ್ಶನ್ ರನ್ನು ಸುಮಲತಾ ಕರೆಯುತ್ತಾರೆ. ಹೀಗಾಗಿ ಈ ಸಭೆಯಲ್ಲಿ ದರ್ಶನ್ ಕೂಡಾ ಭಾಗಿಯಾಗುವ ಸಾಧ‍್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಡಿ ಇಲಾಖೆಯನ್ನು ನಾವು ಕಂಟ್ರೋಲ್ ಮಾಡುತ್ತಿಲ್ಲ: ಪ್ರಧಾನಿ ಮೋದಿ ಸ್ಪಷ್ಟನೆ