Select Your Language

Notifications

webdunia
webdunia
webdunia
webdunia

ಮಹಿಳಾ ಸ್ವಸಹಾಯ ಸಂಘದಿಂದ ನಟ ದರ್ಶನ್ ವಿರುದ್ಧ ದೂರಿನ ಸುರಿಮಳೆ

ದರ್ಶನ್

geetha

bangalore , ಶುಕ್ರವಾರ, 23 ಫೆಬ್ರವರಿ 2024 (14:30 IST)
ಬೆಂಗಳೂರು-ನಟ ದರ್ಶನ್ ವಿರುದ್ಧ ಮಹಿಳಾ ಸ್ವಸಹಾಯ ಸಂಘದಿಂದ ದೂರು ದಾಖಲಿಸಲಾಗಿದೆ.ವೇದಿಕೆ ಮೇಲೆ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ದರ್ಶನ್ ನೀಡಿದ್ದು,ಸ್ಟಾರ್ ನಟನಾಗಿ ಮಹಿಳೆಯರ ಬಗ್ಗೆ ಈ ರೀತಿ ಹೇಳಿಕೆ ಸಮಂಜಸವಲ್ಲ .ಈ ಹಿನ್ನೆಲೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ಸ್ವಸಹಾಯ ಮಹಿಳಾ ಸಂಘದಿಂದ ದೂರು ದಾಖಲಿಸಲಾಗಿದೆ.
 
ಚಾಲೆಂಜಿಂಗ್ ಸ್ಟಾರ್'ಗೆ ಮಹಿಳೆಯರಿಂದ ದೂರಿನ ಸುರಿಮಳೆಯೇ ಬಂದಿದೆ.ನಟ ದರ್ಶನ್ ವಿರುದ್ಧ ದೂರು ನೀಡಲು ಮಹಿಳಾ ಸಂಘ ಸಂಸ್ಥೆಗಳ ಸದಸ್ಯರು ,ಶ್ರೀ ಶಕ್ತಿ ಮಹಿಳಾ ಸ್ವಸಹಾಯ ಸಂಘದವರು ಸೇರಿದಂತೆ 50ಕ್ಕಿಂತಲೂ ಹೆಚ್ಚಿನ ಮಹಿಳೆಯರು ಪುಟ್ಟೇನಹಳ್ಳಿ ಠಾಣೆಗೆ ಆಗಮಿಸಿದ್ದಾರೆ.ಇತ್ತೀಚಿಗೆ ದರ್ಶನ್ ಉಮಾಪತಿ ವಿರುದ್ದ ಅಸಂಬದ್ಧ ಪದ ಬಳಕೆ ಮಾಡಿದ್ದಾರೆ.ಪಾಂಡವಪುರದಲ್ಲಿ ಮಹಿಳೆಯರ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ.ನಟ ದರ್ಶನ್ ತಮ್ಮ ನಡವಳಿಕೆ ಸರಿಪಡಿಸಿಕೊಂಡು, ಕ್ಷಮೆ ಕೇಳಬೇಕು ಅಂತ ಮಹಿಳಾ ಸಂಘದವರು ಆಗ್ರಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಕ್ರಾಪ್ ಬಸ್ಸಿನಲ್ಲಿ ನೌಕರರಿಗಾಗಿ ಕ್ಯಾಂಟಿನ್ ನಿರ್ಮಿಸಿದ ಬಿಎಂಟಿಸಿ