Webdunia - Bharat's app for daily news and videos

Install App

ಬಸನಗೌಡ ಪಾಟೀಲ್ ಮಾಡ್ತಿರೋದು ಕಾಮಿಡಿ, ಅವರು ಸುಳ್ಳು ಭವಿಷ್ಯಗಾರ

Webdunia
ಮಂಗಳವಾರ, 7 ಮೇ 2019 (19:43 IST)
ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ಜೆಡಿಎಸ್ ಮುಖಂಡ ಕಿಡಿಕಾರಿದ್ದಾರೆ.

ಬಸನಗೌಡ ಪಾಟೀಲ್ ಸುಳ್ಳು ಭವಿಷ್ಯ ಹೇಳುವುದನ್ನು ಮೊದಲು ಬಿಡಬೇಕು ಅಂತ ಮೇಲ್ಮನೆ ಜೆಡಿಎಸ್ ಸದಸ್ಯ ಟಿ.ಎ.ಶರವಣ ಕಿಡಿಕಾರಿದ್ದಾರೆ.  ಪಾಟೀಲ್ ರಾಜಕೀಯ ಮಾಡುವುದನ್ನು ಬಿಟ್ಟು ಜ್ಯೋತಿಷ್ಯವನ್ನು ಎಂದಿನಿಂದ ಹೇಳುವುದನ್ನು ಶುರುಮಾಡಿದ್ದಾರೆ? ಬಸನಗೌಡ ಅವರಿಗೆ ತಮಾಷೆ ಮಾಡುವ ಅಭ್ಯಾಸವಿದೆ.

ಅದನ್ನು ಅವರು ಆಗಾಗ ರಾಜಕೀಯದಲ್ಲಿಯೂ ಬಳಸುತ್ತಿರುತ್ತಾರೆ ಎಂದು ಟೀಕೆ ಮಾಡಿದ್ರು. ಮೈತ್ರಿ ಸರ್ಕಾರ ಪತನಗೊಳ್ಳುತ್ತದೆ ಎಂದು ಸುಳ್ಳು ಭವಿಷ್ಯ, ‌ಜ್ಯೋತಿಷ್ಯ ಹೇಳಿದ ಬಿಜೆಪಿ ನಾಯಕರ ಹೇಳಿಕೆ ಠುಸ್ ಆಗಿದೆ. ಅದೇ ರೀತಿ ಬಸನಗೌಡ ಪಾಟೀಲರ ಭವಿಷ್ಯವೂ ಸುಳ್ಳಾಗಲಿದೆ.

ನಮ್ಮ ನಾಯಕರಾಗಿರುವ  ಹೆಚ್‌‌.ಡಿ.ಕುಮಾರಸ್ವಾಮಿ ಅವರು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುವುದು ಖಚಿತ ಎಂದರು.

ವಿಜಯಪುರದಲ್ಲಿ ಬಸನಗೌಡ ಪಾಟೀಲ್, ಸಿದ್ದರಾಮಯ್ಯ ಅವರು ಮೇ 23 ರ ಬಳಿಕ ಮೈತ್ರಿ ಸರ್ಕಾರವನ್ನು ಪತನಗೊಳಿಸಲಿದ್ದಾರೆ ಎಂದು ಹೇಳಿಕೆ ನೀಡಿದ್ದರು.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments