Select Your Language

Notifications

webdunia
webdunia
webdunia
webdunia

ಕೊಲಂಬೋ ಬಾಂಬ್ ಸ್ಪೋಟ: ಗೃಹ ಸಚಿವ ಹೇಳಿದ್ದೇನು?

ಕೊಲಂಬೋ ಬಾಂಬ್ ಸ್ಪೋಟ: ಗೃಹ ಸಚಿವ ಹೇಳಿದ್ದೇನು?
ವಿಜಯಪುರ , ಸೋಮವಾರ, 22 ಏಪ್ರಿಲ್ 2019 (17:06 IST)
ಶ್ರೀಲಂಕಾದಲ್ಲಿ ಬಾಂಬ್ ಸ್ಪೋಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಗೃಹ ಸಚಿವ ಹೇಳಿಕೆ ನೀಡಿದ್ದಾರೆ.

ವಿಜಯಪುರ ನಗರದಲ್ಲಿ ಗೃಹ ಸಚಿವ  ಎಂ. ಬಿ. ಪಾಟೀಲ್  ಹೇಳಿಕೆ ನೀಡಿದ್ದು, ಕೋಲೋಂಬೋದಲ್ಲಿ ನಡೆದ ಸರಣಿ ಬಾಂಬ್ ಬ್ಲಾಸ್ಟ್  ಹೇಯ ಕೃತ್ಯವಾಗಿದೆ ಎಂದಿದ್ದಾರೆ.

200 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು‌ ದುರಂತ. ಇಂಥ ಕೃತ್ಯಗಳು ಯಾವುದೇ ದೇಶದಲ್ಲಿ ಆಗಬಾರದು. ಘಟನೆಯನ್ನು ಖಂಡಿಸುವುದಾಗಿ ತಿಳಿಸಿದ್ರು.

ಕೊಲೋಂಬೋದಲ್ಲಿ ನಮ್ಮ ರಾಜ್ಯದ ಇಬ್ಬರು ಮೃತ ಪಟ್ಟಿರುವ  ವಿಚಾರವಿದೆ. ಅದು  ದೃಢ ಪಟ್ಟ ಬಳಿಕ ಮಾಹಿತಿ ನೀಡಲಾಗುತ್ತದೆ.

ವಿದೇಶಾಂಗ ಇಲಾಖೆಯ ಅಧಿಕಾರಿಗಳ ಜೊತೆಗೆ ಡಿಜಿಪಿ‌ ಅವರು ಸಂಪರ್ಕದಲ್ಲಿದ್ದಾರೆ. ನಮ್ಮ ಪೊಲೀಸರು ಶ್ರೀಲಂಕಾದ ಇಂಡಿಯನ್ ಎಂಬೆಸ್ಸಿ ಜೊತೆಗೆ ಸಂಪರ್ಕದಲ್ಲಿದ್ದಾರೆ.  ಇದೊಂದು ಸೂಕ್ಷ್ಮ‌ ವಿಚಾರವಾಗಿದೆ. ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಅಧಿಕೃತವಾಗಿ ಮಾಹಿತಿ ಪಡೆದು  ಮಾಹಿತಿಯನ್ನು ನೀಡುತ್ತಾರೆ ಎಂದ್ರು.  




Share this Story:

Follow Webdunia kannada

ಮುಂದಿನ ಸುದ್ದಿ

ಅಂಬರೀಶ್ ಪುತ್ರ ಸಚಿವ ತಮ್ಮಣ್ಣ ವಿರುದ್ಧ ಸ್ಪರ್ಧೆ?