Select Your Language

Notifications

webdunia
webdunia
webdunia
webdunia

ಕರ್ತವ್ಯ ನಿರತ ಡಿಸಿಪಿಗೆ ಸಿಎಂ ಸೋದರಳಿಯನಿಂದ ಬೆದರಿಕೆ

ಕರ್ತವ್ಯ ನಿರತ ಡಿಸಿಪಿಗೆ ಸಿಎಂ ಸೋದರಳಿಯನಿಂದ ಬೆದರಿಕೆ
ಮೈಸೂರು , ಗುರುವಾರ, 29 ಆಗಸ್ಟ್ 2019 (13:27 IST)
ಮೈಸೂರು : ಕರ್ತವ್ಯ ನಿರತ ಡಿಸಿಪಿಗೆ ಸಿಎಂ ಯಡಿಯೂರಪ್ಪ ಅವರ ಸೋದರಳಿಯ ವರ್ಗಾವಣೆ ಮಾಡಿಸುವುದಾಗಿ ಧಮ್ಕಿ ಹಾಕಿದ್ದಾರೆ.




ಇಂದು ಸಿಎಂ ಯಡಿಯೂರಪ್ಪ ಕೆಆರ್‍ ಎಸ್ ಜಲಾಶಯದಲ್ಲಿ ಬಾಗಿನ ಸಲ್ಲಿಸುವ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಈ ಹಿನ್ನಲೆಯಲ್ಲಿ ಸಿಎಂ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದರು. ದೇವಸ್ಥಾನದಲ್ಲಿ ಸಿಎಂ ಆಗೂ ಇತರೆ ಸಚಿವರು ಪೂಜೆ ಸಲ್ಲಿಸುತ್ತಿದ್ದ ಕಾರಣಕ್ಕೆ ಭದ್ರತಾ ದೃಷ್ಟಿಯಿಂದ ಸಿಎಂ ಯಡಿಯೂರಪ್ಪ ಅವರ ತಂಗಿ ಮಗ ರಾಜೇಶ್ ಹಾಗೂ ಅವರೊಟ್ಟಿಗೆ ಇದ್ದ ಕಾರ್ಯಕರ್ತರನ್ನು ಪೊಲೀಸರು ಒಳಗೆ ಬಿಟ್ಟಿರಲಿಲ್ಲ.

 

ಇದರಿಂದ ರೊಚ್ಚಿಗೆದ್ದ ರಾಜೇಶ್ ಕರ್ತವ್ಯ ನಿರತ ಡಿಸಿಪಿಗೆ ಏಕವಚನದಲ್ಲೇ ಅವಾಜ್ ಹಾಕಿ, ನೀನು ಇಲ್ಲಿಂದ ಬೇಗ ಹೋಗ್ತೀಯಾ. ನಾನು ವೈಯಕ್ತಿಕವಾಗಿ ನಿನ್ನ ವಿರುದ್ಧ ಸಿಎಂಗೆ ದೂರು ಕೊಡುತ್ತೇನೆ ಎಂದು ಹೇಳಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯ ಜಿಲ್ಲಾ ಉಸ್ತುವಾರಿ ಸಚಿವರ ಸಂಭವನೀಯ ಪಟ್ಟಿ ಹೀಗಿದೆ