Select Your Language

Notifications

webdunia
webdunia
webdunia
webdunia

ಸಂಪುಟ ಸಂಕಟ: ಕೈ ಪಾಳೆಯದಲ್ಲಿ ಆಕ್ರೋಶ

ಸಂಪುಟ ಸಂಕಟ: ಕೈ ಪಾಳೆಯದಲ್ಲಿ ಆಕ್ರೋಶ
ಬೆಂಗಳೂರು , ಭಾನುವಾರ, 7 ಅಕ್ಟೋಬರ್ 2018 (18:30 IST)
ರಾಜ್ಯದ ಎರಡು ವಿಧಾನಸಭೆ ಕ್ಷೇತ್ರಗಳ ಚುನಾವಣೆ ಹಾಗೂ ಮೂರು ಎಂಪಿ ಸ್ಥಾನಗಳ ಚುನಾವಣೆ ಬಳಿಕ ಸಂಪುಟ ವಿಸ್ತರಣೆ ಮಾಡುವ ಕುರಿತು ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಕೈಪಾಳೆಯದ ನಾಯಕರ ವಿರುದ್ಧ ಶಾಸಕರು ಅಸಮಧಾನ ಹೊರಹಾಕುತ್ತಿದ್ದಾರೆ.

ಕಾಂಗ್ರೆಸ್ ನಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು ತಮ್ಮ ಅಸಮಧಾನ ಹಾಗೂ ಆಕ್ರೋಶವನ್ನು ಪಕ್ಷದ ನಾಯಕರ ವಿರುದ್ಧ ಹೊರ ಹಾಕುತ್ತಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗುತ್ತಿರುವ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಲ್ಲಿ ಹಿರಿ-ಕಿರಿಯ ಶಾಸಕರು ಪಕ್ಷದ ಮುಖಂಡರ ವಿರುದ್ಧ ಕಿಡಿಕಾರುತ್ತಿದ್ದಾರೆ.

ಹಾವೇರಿ ಜಿಲ್ಲೆಯ ಹಿರೆಕೆರೂರು ಶಾಸಕ ಬಿ.ಸಿ.ಪಾಟೀಲ್, ಪಕ್ಷದ ಹೆಸರಿನಲ್ಲಿ ಸರ್ವಾಧಿಕಾರಿ ಧೋರಣೆ ಎತ್ತಿ ಹಿಡಿಯುವ ಮೂಲಕ ಪ್ರಜಾಪ್ರಭುತ್ವವನ್ನು ಕೊಲೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಗುಂಪು ಹಲ್ಲೆ, ಗುಂಪು ಹತ್ಯೆ ತಡೆಗಾಗಿ ಕಠಿಣ ಕ್ರಮ ಏನು ಗೊತ್ತಾ?