Select Your Language

Notifications

webdunia
webdunia
webdunia
webdunia

ಸಂಪುಟ ಸೇರಲು ತೀವ್ರಗೊಂಡ ಪೈಪೋಟಿ

ಸಂಪುಟ ಸೇರಲು ತೀವ್ರಗೊಂಡ ಪೈಪೋಟಿ
ಬೆಂಗಳೂರು , ಬುಧವಾರ, 3 ಅಕ್ಟೋಬರ್ 2018 (19:27 IST)
ರಾಜ್ಯದ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರಕಾರದ ಸಚಿವ ಸಂಪುಟ ವಿಸ್ತರಣೆಗೆ ದಿನಗಣನೆ ಆರಂಭಗೊಂಡಿದೆ. ಏತನ್ಮಧ್ಯೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಲ್ಲಿ ಸಚಿವ ಸ್ಥಾನಕ್ಕಾಗಿ ಒತ್ತಡ ಹಾಗೂ ಲಾಬಿ ಹೆಚ್ಚುತ್ತಿರುವುದು ಉಭಯ ಪಕ್ಷಗಳ ಮುಖಂಡರ ತಲೆನೋವಿಗೆ ಕಾರಣವಾಗುತ್ತಿದೆ.

ಶಾಸಕರು ಹಾಗೂ ಮಾಜಿ ಸಚಿವರು, ಕೆಲವು ವಿಧಾನ ಪರಿಷತ್ ಸದಸ್ಯರು ದೆಹಲಿಯಲ್ಲಿ ಬೀಡುಬಿಟ್ಟಿದ್ದು, ತಮ್ಮ ಗಾಡ ಫಾದರ್ ಗಳ ಮೂಲಕ ವರಿಷ್ಠರ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ.

ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಡಿ.ಕೆ. ಶಿವಕುಮಾರ್ ಮತ್ತಿತರರ ಮೇಲೆ ಒತ್ತಡ ಹೇರಲಾಗಿದೆ. ಎರಡ್ಮೂರು ದಿನಗಳಲ್ಲಿ ಹಲವು ಆಕಾಂಕ್ಷಿಗಳು ದೆಹಲಿಗೆ ತೆರಳಲಿದ್ದಾರೆ.

ಜೆಡಿಎಸ್ ನಲ್ಲಿಯೂ ಕೂಡ ಸಚಿವ ಸ್ಥಾನಕ್ಕೆ ಒತ್ತಡ ಹೆಚ್ಚಾಗುತ್ತಿದೆ. ಆಕಾಂಕ್ಷಿಗಳನ್ನು ಸಮಾಧಾನ ಪಡಿಸುವುದು ಉಭಯ ಪಕ್ಷಗಳ ನಾಯಕರಿಗೆ ಸವಾಲಿನ ಕೆಲಸವಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಅಂತರ ವಿಶ್ವವಿದ್ಯಾಲಯದ ಕ್ರಾಸ್-ಕಂಟ್ರಿ ಚಾಂಪಿಯನ್‍ಶಿಪ್ ಓಟ ಅ.4ಕ್ಕೆ