Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ಸುತ್ತ ಸಚಿವ ಆಕಾಂಕ್ಷಿಗಳ ಚಿತ್ತ

ಸಿದ್ದರಾಮಯ್ಯ ಸುತ್ತ ಸಚಿವ ಆಕಾಂಕ್ಷಿಗಳ ಚಿತ್ತ
ಬೆಂಗಳೂರು , ಶುಕ್ರವಾರ, 5 ಅಕ್ಟೋಬರ್ 2018 (19:48 IST)
ಕಾಂಗ್ರೆಸ್ -  ಜೆಡಿಎಸ್ ಮೈತ್ರಿ ಸರಕಾರದ ಸಚಿವ ಸಂಪುಟ ವಿಸ್ತರಣೆಗೆ ದಿನಗಣನೆ ಆರಂಭಗೊಂಡಿರುವಂತೆ ಸಚಿವ ಆಕಾಂಕ್ಷಿಗಳು ಸಮನ್ವಯ ಸಮಿತಿ ಅಧ್ಯಕ್ಷರತ್ತ ಚಿತ್ತ ಹರಿಸಿದ್ದಾರೆ.

ಒಂದೆರಡು ದಿನ ಯಾರ ಭೇಟಿಗೂ ಅವಕಾಶ ನೀಡದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರ ನಿವಾಸ ಇಂದು ರಾಜಕೀಯ ಚಟುವಟಿಕೆಗಳ ಕೇಂದ್ರಬಿಂದುವಾಗಿತ್ತು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್, ಶಾಸಕರಾದ ಡಾ.ಕೆ.ಸುಧಾಕರ, ತುಕಾರಾಂ, ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಸೇರಿದಂತೆ ಅನೇಕ ಮುಖಂಡರು ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ಸಂಪುಟದಲ್ಲಿ ಸ್ಥಾನ ಪಡೆಯಲು ಹಲವು ಮುಖಂಡರು ಸಿದ್ದರಾಮಯ್ಯನವರ ಬೆಂಬಲ ಕೋರಲು ಆಗಮಿಸಿದ್ದರು.



Share this Story:

Follow Webdunia kannada

ಮುಂದಿನ ಸುದ್ದಿ

ಎಂಪಿ ಚುನಾವಣೆ: ಬಿಎಸ್ಪಿಯಿಂದ ಭಂಗವಿಲ್ಲ ಎಂದು ರಾಹುಲ್ ಹೇಳಿದ್ದೇಕೆ?