Select Your Language

Notifications

webdunia
webdunia
webdunia
webdunia

ಬಿಎಸ್‌ವೈ ಅಂದ್ರೆ ಅಭಿವೃದ್ಧಿ, ಸಿದ್ರಾಮಯ್ಯ ಅಂದ್ರೆ ನಿದ್ದೆ : ಪ್ರತಾಪ ಸಿಂಹ

ಬಿಎಸ್‌ವೈ ಅಂದ್ರೆ ಅಭಿವೃದ್ಧಿ, ಸಿದ್ರಾಮಯ್ಯ ಅಂದ್ರೆ ನಿದ್ದೆ : ಪ್ರತಾಪ ಸಿಂಹ
ಮೈಸೂರು , ಗುರುವಾರ, 26 ಅಕ್ಟೋಬರ್ 2017 (14:31 IST)
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಂದ್ರೆ ಅಭಿವೃದ್ಧಿಯ ನೆನಪಾಗುತ್ತದೆ. ಸಿಎಂ ಸಿದ್ದರಾಮಯ್ಯ ಅಂದ್ರೆ ನಿದ್ದೆಯ ನೆನಪಾಗುತ್ತದೆ ಎಂದು ಬಿಜೆಪಿ ಸಂಸದ ಪ್ರತಾಪ ಸಿಂಹ ಲೇವಡಿ ಮಾಡಿದ್ದಾರೆ.
ಮೈ,ಸೂರಿನಲ್ಲಿ ನಡೆದ ಬಿಜೆಪಿ ರೈತರ ಸಮಾವೇಶದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಹೆಸರು ಹೇಳಿದಾಗ ಅಭಿವೃದ್ಧಿ ಕಾರ್ಯಗಳು ನೆನಪಾಗುತ್ತವೆ. ಸಿಎಂ ಸಿದ್ದರಾಮಯ್ಯ ಹೆಸರು ಹೇಳಿದ ಕೂಡಲೇ ನಿದ್ದೆಯ ನೆನಪಾಗುತ್ತದೆ ಎಂದು ತಿಳಿಸಿದ್ದಾರೆ.
 
ಯಾರದೋ ದುಡ್ಡು ಎಲ್ಲಮ್ಮ ಜಾತ್ರೆ ಎನ್ನುವಂತೆ ಕೇಂದ್ರದ ಹಣದಲ್ಲಿ ಸಿಎಂ ಸಿದ್ದರಾಮಯ್ಯ ಸರಕಾರ ನಡಿತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
 
ಬಿಜೆಪಿ ರೈತರ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅನೇಕ ಮುಖಂಡರು ಸಮಾವೇಶದಲ್ಲಿ ಉಪಸ್ಥಿತರಿದ್ದರು. ಆದರೆ. ಬಿಜೆಪಿ ರೈತಮೋರ್ಚಾದ ರಾಜ್ಯಾಧ್ಯಕ್ಷ ಸಿ.ವಿಜಯ್ ಶಂಕರ್ ಸಮಾವೇಶಕ್ಕೆ ಗೈರುಹಾಜರಾಗಿರುವುದು ಕೆಲವರ ಅಪಸ್ವರಕ್ಕೆ ಕಾರಣವಾಯಿತು ಎಂದು ಮೂಲಗಳು ತಿಳಿಸಿವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕುಡಿಯುವ ನೀರಿನ ಬಾಟೆಲ್ ನಲ್ಲಿ ಜಿರಳೆ ಪತ್ತೆ