Publish Date: Thu, 14 Feb 2019 (15:11 IST)
Updated Date: Thu, 14 Feb 2019 (15:13 IST)
ಲಂಚ ಪಡೆಯುತ್ತಿದ್ದ ಅಧಿಕಾರಿಯೊಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.
18 ಸಾವಿರ ಲಂಚ ಪಡೆಯುವ ವೇಳೆ ಕೋಲಾರ ತಾಲ್ಲೂಕು ಬಿಸಿಎಂ ವಿಸ್ತರಣಾಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಕೋಲಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಲಂಚ ಪಡೆಯುವ ವೇಳೆ ಎಸಿಬಿ ದಾಳಿ ನಡೆಸಿದೆ. ತಾಲ್ಲೂಕು ವಿಸ್ತರಣಾಧಿಕಾರಿ ಮಂಜುನಾಥ್ 18 ಸಾವಿರ ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದವರು.
ಹಾಸ್ಟೆಲ್ ಗಳಿಗೆ ನೀರು ಸರಬರಾಜು ಮಾಡಿದ 93 ಸಾವಿರ ಬಿಲ್ ಪಾಸ್ ಮಾಡಲು 18 ಸಾವಿರ ಹಣ ಪಡೆಯುವ ವೇಳೆ ಎಸಿಬಿ ದಾಳಿ ನಡೆಸಿದೆ.
ದೂರುದಾರ ಮಂಜುನಾಥ್ ಎಂಬುವರು ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ ಹಿನ್ನಲೆ ಈ ದಾಳಿ ನಡೆದಿದೆ. ಎಸಿಬಿ ಡಿಎಸ್ಪಿ ಪುರುಷೋತ್ತಮ್ ನೇತೃತ್ವದಲ್ಲಿ ದಾಳಿ ನಡೆದದ್ದು, ಲಂಚ ಪಡೆದ ಅಧಿಕಾರಿ ಮಂಜುನಾಥ್ ಅವರನ್ನ ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.