Select Your Language

Notifications

webdunia
webdunia
webdunia
webdunia

ಬಿಜೆಪಿ ಬಂಡಾಯಗಾರರ ಉಚ್ಛಾಟನೆ

ಬಿಜೆಪಿ ಬಂಡಾಯಗಾರರ ಉಚ್ಛಾಟನೆ
ಬಾಗಲಕೋಟೆ , ಬುಧವಾರ, 2 ಮೇ 2018 (13:45 IST)
ಜಿಲ್ಲೆಯ ಜಮಖಂಡಿ ಮತ್ತು ಹುನಗುಂದ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿಗಳನ್ನ ಆರು ವರ್ಷ ಕಾಲ ಪಕ್ಷದಿಂದ ಉಚ್ಚಾಟಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ .ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. 
ಜಮಖಂಡಿ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿರೋ ಮಾಜಿ ಸಚಿವ ಮುರಗೇಶ್ ನಿರಾಣಿ ಸಹೋದರ  ಸಂಗಮೇಶ್ ನಿರಾಣಿ ಹಾಗೂ ಹುನಗುಂದ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ದಿಸಿರುವ ಎಸ್. ಆರ್. ನವಲಿಹಿರೇಮಠ್ ಅವರನ್ನ ಆರು ವರ್ಷ ಕಾಲ ರಾಜ್ಯಾಧ್ಯಕ್ಷ ಬಿಎಸ್ವೈ ಉಚ್ಚಾಟಿಸಿ ಆದೇಶಿಸಿದ್ದಾರೆ.
 
ಇನ್ನು ಪಕ್ಷ ಮತ್ತು ಮನೆಯವರ ನಿಯಂತ್ರಣಕ್ಕೂ ಮೀರಿ ಜಮಖಂಡಿ ಕ್ಷೇತ್ರದ ಜನತೆಯ ಇಷ್ಟದಂತೆ ನಡೆಯಲು ನಾನು ಸಿದ್ದ ಎಂದು ಬಿಜೆಪಿಯಿಂದ ಉಚ್ಚಾಟನೆಗೊಳಗಾದ ಸಂಗಮೇಶ್ ನಿರಾಣಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆ.ಜಯಪ್ರಕಾಶ ಹೆಗ್ಡೆಗೆ ಕೈ ಕುಲುಕದ ಮೋದಿ