Publish Date: Wed, 02 May 2018 (12:33 IST)
Updated Date: Wed, 02 May 2018 (12:34 IST)
ಬಳ್ಳಾರಿ: ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ವಿರುದ್ಧ ಬಹುಭಾಷಾ ತಾರೆ ಪ್ರಕಾಶ್ ರೈ ವಾಗ್ದಾಳಿ ನಡೆಸಿದ್ದಾರೆ. ನಾನು ಮೋದಿ ಹಾಗೆ ಭಾಷಣ ಮಾಡಲ್ಲ, ಉತ್ತರ ಕೊಡುತ್ತೇನೆ ಎಂದಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಏನಾದರೂ ಪ್ರಶ್ನೆ ಮಾಡಿದರೆ ಕೈ ಕತ್ತರಿಸ್ತೀನಿ, ಬೆರಳು ಕತ್ತರಿಸ್ತೀನಿ ಅಂತಾರೆ. ಉತ್ತರ ಕೊಡಲ್ಲ. ನಾನು ಬರೀ ಮಾತಾಡಲ್ಲ. ಉತ್ತರ ಕೊಡ್ತೀನಿ ಎಂದಿದ್ದಾರೆ.
ಅಷ್ಟೇ ಅಲ್ಲ, ದೇವೇಗೌಡರ ಬಗ್ಗೆ ಹೊಗಳಿಕೆಯ ಮಾತನಾಡಿದ ಪ್ರಧಾನಿ ಮೋದಿ ವರಸೆಯನ್ನು ಟೀಕಿಸಿದ ಪ್ರಕಾಶ್ ರೈ ಕಾವೇರಿ ಬಗ್ಗೆ ದೇವೇಗೌಡರು ಪ್ರಶ್ನೆ ಮಾಡಿದರೆ ಉತ್ತರಿಸಲಿಲ್ಲ. ಈಗ ಇದ್ದಕ್ಕಿದ್ದ ಹಾಗೆ ಗೌಡರ ಮೇಲೆ ಪ್ರೀತಿ ಹುಟ್ಟಿದ್ದು ಯಾಕೆ? ಎಂದು ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
Krishnaveni K
Publish Date: Wed, 02 May 2018 (12:33 IST)
Updated Date: Wed, 02 May 2018 (12:34 IST)