Publish Date: Wed, 02 May 2018 (09:40 IST)
Updated Date: Wed, 02 May 2018 (09:42 IST)
ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳಲು ಮಾತುಕತೆ ನಡೆಸಿವೆ ಎಂದು ದೇವೇಗೌಡ ಮತ್ತು ಕುಮಾರಸ್ವಾಮಿ ಅಂತಹ ಪ್ರಯತ್ನ ಮಾಡದಂತೆ ತಂತ್ರ ರೂಪಿಸಿದ್ದ ಸಿಎಂ ಸಿದ್ದರಾಮಯ್ಯಗೆ ಪ್ರಧಾನಿ ಮೋದಿ ಶಾಕ್ ಕೊಟ್ಟಿದ್ದಾರೆ.
ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೇ ಬಿಜೆಪಿ ಜತೆ ಕುಮಾರಸ್ವಾಮಿ ಹೋದರೆ ಕುಟುಂಬದಿಂದಲೇ ಬಹಿಷಷ್ಕಾರ ಹಾಕುವುದಾಗಿ ದೇವೇಗೌಡರು ಎಚ್ಚರಿಸಿದ್ದರು. ಇದರಿಂದಾಗಿ ಬಿಜೆಪಿ-ಜೆಡಿಎಸ್ ಮೈತ್ರಿ ಬಾಗಿಲು ಮುಚ್ಚುವ ಹಂತಕ್ಕೆ ಬಂದಿತ್ತು.
ಆದರೆ ನಿನ್ನೆ ಉಡುಪಿಯಲ್ಲಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ ದೇವೇಗೌಡರನ್ನು ಹಾಡಿ ಹೊಗಳಿದ್ದಾರೆ. ಈ ಮೂಲಕ ದೇವೇಗೌಡರ ಪ್ರೀತಿ ಗಳಿಸುವ ಪ್ರಯತ್ನ ಮಾಡಿದ್ದಾರೆ.
‘ದೇವೇಗೌಡರು ನಮ್ಮ ದೇಶದ ವರಿಷ್ಠ ನಾಯಕರು. ಒಂದು ವೇಳೆ ಅವರು ನಮ್ಮ ಮನೆಗೆ ಬಂದರೆ ಬರುವಾಗ ಕಾರಿನ ಡೋರ್ ತೆಗೆದು ಅವರನ್ನು ಸ್ವಾಗತಿಸುತ್ತೇನೆ. ಹಾಗೆಯೇ ಹೋಗುವಾಗ ಡೋರ್ ತೆಗೆದು ಕಾರಿನಲ್ಲಿ ಕುಳ್ಳಿರಿಸಿ ಕಳುಹಿಸಿಕೊಡುತ್ತೇನೆ. ನಾವು ಬೇರೆ ಪಕ್ಷ, ಸಿದ್ಧಾಂತ ಹೊಂದಿದವರಾದರೂ ಅವರು ಹಿರಿಯರು ಎನ್ನುವ ಗೌರವ ನಾವು ಕೊಡುತ್ತೇವೆ.
ಆದರೆ ಕೆಲವು ದಿನಗಳ ಹಿಂದೆ ಇಲ್ಲಿಗೆ ಬಂದಿದ್ದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಅವರ ಬಗ್ಗೆಯೇ ಹಗುರವಾಗಿ ಮಾತನಾಡುತ್ತಾರೆ. ಇವರು ಇನ್ನೂ ಜೀವನ ಆರಂಭಿಸಿದ್ದಾರಷ್ಟೇ. ಈಗಲೇ ಹೀಗಾದರೆ ಮುಂದೆ ಪರಿಸ್ಥಿತಿ ಹೇಗಿರಬೇಡ?’ ಎಂದು ಪ್ರಧಾನಿ ಮೋದಿ, ದೇವೇಗೌಡರನ್ನು ಹೊಗಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.