Publish Date: Fri, 08 Nov 2019 (18:54 IST)
Updated Date: Fri, 08 Nov 2019 (18:56 IST)
ರಾಜ್ಯ ಸರಕಾರ ಬಹಳ ಎಚ್ಚರಿಕೆಯಿಂದ ಆಡಳಿತ ನಡೆಸಬೇಕು. ಯಾವುದೇ ಕಾರಣಕ್ಕೂ ನಿರಾಸೆ ಆಗಬಾರದು ಅಂತ ಬಿಜೆಪಿ ಹಿರಿಯ ಸಂಸದ ಹೇಳಿದ್ದಾರೆ.
ರಾಜ್ಯ ಸರ್ಕಾರ ಉಳಿದ ಮೂರೂವರೆ ವರ್ಷಗಳ ಅವಧಿಯನ್ನು ಪೂರ್ಣಗೊಳಿಸುತ್ತದೆ. ಬಹಳ ಎಚ್ಚರಿಕೆಯಿಂದ ಆಡಳಿತ ನಡೆಸಬೇಕು. ಯಾವುದೇ ಕಾರಣಕ್ಕೂ ನಿರಾಸೆ ಆಗಬಾರದು. ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ಬರಬಾರದು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೈಕಮಾಂಡ್ ಸಹಕಾರ ಪಡೆದು ಆಡಳಿತಾವಧಿ ಪೂರ್ಣಗೊಳಿಸಬೇಕು. ಉಳಿದ ಅವಧಿಯನ್ನು ಪೂರ್ಣ ಗೊಳಿಸಬೇಕೆಂಬುದೇ ನಮ್ಮ ಆಸೆಯಾಗಿದೆ ಅಂತ ಚಾಮರಾಜನಗರದಲ್ಲಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿಕೆ ನೀಡಿದ್ದಾರೆ.